ರಜೆ ಮೇಲೆ ಊರಿಗೆ ಬಂದಿದ್ಧ ಯೋಧ ಹೃದಯಾಘಾತದಿಂದ ಸಾವು. ಮೈಸೂರು,ಅಕ್ಟೋಬರ್,12,2022(..):ರಜೆ ಮೇಲೆ ಊರಿಗೆ ಬಂದಿದ್ಧ ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಹುಣಸೂರು ತಾಲ್ಲೂಕಿನ ಚಿಟ್ಟಕ್ಯಾತನಹಳ್ಳಿ ಗ್ರಾಮದ ನಿವಾಸಿ ಯೋಧ ಮಹೇಶ್ (40) ಹೃದಯಾ‍ಘಾತದಿಂದ ಮೃತಪಟ್ಟಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ಮಹೇಶ್ ಸಾವನ್ನಪ್ಪಿದ್ದಾರೆ. ಮೃತ ಯೋಧ ಮಹೇಶ್ ಪಶ್ಚಿಮ ಬಂಗಾಳದ ಸೇನೆ ತುಕುಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾಲ್ಕು ದಿನದ ಹಿಂದೆ ರಜೆ ಮೇಲೆ ಊರಿಗೆ ಆಗಮಿಸಿದ್ದರು. : – – -