ಪಿಎಸ್ ಐ ನೇಮಕಾತಿ ಹಗರಣ: ಕೋರ್ಟ್ ಗೆ ಶರಣಾದ 37ನೇ ಆರೋಪಿ. ಬೆಂಗಳೂರು,ಸೆಪ್ಟಂಬರ್,15,2022(..):545 ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 37ನೇ ಆರೋಪಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಗೆ ಶರಣಾಗಿದ್ದಾನೆ. ಪ್ರಕರಣ ಸಂಬಂಧ 37ನೇ ಆರೋಪಿ ಬೋರೇಗೌಡ ಕೋರ್ಟ್ ಗೆ ಶರಣಾಗಿದ್ದಾನೆ. ಆರೋಪಿಯನ್ನ 10 ದಿನ ಸಿಐಡಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಬೋರೆಗೌಡ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಜೋಡಿಹೊಸಹಳ್ಳಿ ನಿವಾಸಿಯಾಗಿದ್ದು, ಸಿಐಡಿ ಪೊಲೀಸರ ತಂಡ ಆಸ್ತಿ ಜಪ್ತಿಗೆ ತೆರಳಿತ್ತು. ಹೀಗಾಗಿ ಆರೋಪಿ ಬೊರೇಗೌಡ ಬಂದು ಕೋರ್ಟ್ ಗೆ ಶರಣಾಗಿದ್ದಾನೆ. : - –- 37th - –