ಬಿಜೆಪಿಯವರು ಯಾವ ಕೇಸ್ ಹಾಕಿದ್ರೂ ಎದುರಿಸಲು ಸಿದ್ಧ- ಡಿ.ಕೆ ಶಿವಕುಮಾರ್. ಮೈಸೂರು, ಸೆಪ್ಟಂಬರ್,15,2022(..):ಬಿಜೆಪಿಯವರು ನನ್ನ ಮೇಲೆ ಯಾವ ಕೇಸ್ ಹಾಕಿದರೂ ಅದನ್ನ ಎದುರಿಸುಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ನನಗೆ ಕೆಲವರು ಪೋನ್ ಮಾಡಿ ರೋಪ್ ಹಾಕಿದ್ದಾರೆ. ಬಿಜೆಪಿಯವರು ಯಾವುದೇ ಕೇಸ್ ಬೇಕಾದರೂ ಹಾಕಲಿ. ಯಾವ ಕೇಸ್ ಹಾಕಿದ್ರೂ ನಾನು ಎದುರಿಸಲು ಸಿದ್ಧ. ನನಗೆ ಕೆಲವು ಅಧಿಕಾರಿಗಳ ಫೋನ್ ಮಾಡಿ ಹೇಳಿದ್ದಾರೆ. ಯಾರು ಏನೇ ಮಾಡಿದರೂ ನಾನು ಎದುರಿಸಲು ಸಿದ್ಧ ಎಂದು ತಿಳಿಸಿದರು. : – – - - .