ಪ್ರಧಾನಿ ಮೋದಿಗೆ ಸರಿಸಾಟಿಯಾದ ನಾಯಕ ಅಂದ್ರೆ ಸಿದ್ಧರಾಮಯ್ಯ-ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಗುಣಗಾನ. ಬೆಂಗಳೂರು,ಸೆಪ್ಟಂಬರ್,9,2022(..):ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನ ಹೊಗಳಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಸರಿಸಾಟಿಯದ ನಾಯದ ಇದ್ದರೇ ಅದು ಸಿದ್ಧರಾಮಯ್ಯ. ನನ್ನ ಮಾತಿನಿಂದ ಯಾರು ಏನಾದ್ರೂ ಬೇಕಾದರೂ ತಿಳಿದುಕೊಳ್ಳಲಿ. ಸೈ ದ್ದಾಂತಿಕವಾಗಿ ಸಿದ್ಧರಾಮಯ್ಯ ರಾಜಿ ಮಾಡಿಕೊಳ್ಳುವವರಲ್ಲ. ಸಿದ್ದರಾಮಯ್ಯ ನಿಲುವು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಅವರ ಆಸೆ ಈಡೇರಲಿ ಎಂದು ವೈಎಸ್ ವಿ ದತ್ತಾ ಹೇಳಿಕೆ ನೀಡಿದ್ದಾರೆ. : - –- - -