ಪಿಎಸ್ ಐ ಹಗರಣ ಮಾಸುವ ಮುನ್ನವೇ ಕೆಪಿಟಿಸಿಎಲ್ ಅಕ್ರಮ- ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟಾಂಗ್. ಬೆಂಗಳೂರು,ಆಗಸ್ಟ್,22,2022(..):ರಾಜ್ಯದಲ್ಲಿ ಪಿಎಸ್ ಐ ನೇಮಕಾತಿ ಹಗರಣದ ಬಳಿಕ ಇದೀಗ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಕುರಿತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 40% ಕಮಿಷನ್ ಸರ್ಕಾರದ ಮತ್ತೊಂದು ಕರ್ಮಕಾಂಡ. ಪಿಎಸ್ ಐ ಅಕ್ರಮ ಮಾಸುವ ಮುನ್ನವೇ ಕೆಪಿಟಿಸಿಎಲ್ ಹಗರಣ. ಜನರಿಗೆ ಒಳ್ಳೆಯ ಆಡಆಳಿತ ಕೊಡುವ ಬದಲಿಗೆ ಬಿಜೆಪಿ ಹಗರಣಗಳ ಮಹಪೂರವನ್ನ ಹರಿಸುತ್ತಿದೆ. ಅಸಮರ್ಥ ಸಿಎಂ, ಅಸಮರ್ಥ ಗೃಹ ಮಂತ್ರಿ ಇಂಥ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದಾರೆ. : -, – -- -