ಭಗವಂತ ಆಶೀರ್ವಾದ ಮಾಡಿದ್ರೆ ಸಿದ್ಧರಾಮಯ್ಯ ಮತ್ತೊಮೆ ಸಿಎಂ ಆಗಲಿ- ಸಚಿವ ಶ್ರೀರಾಮುಲು ಹೇಳಿಕೆ. ಬಳ್ಳಾರಿ,ಆಗಸ್ಟ್,16,2022(..): ಭಗವಂತ ಆಶೀರ್ವಾದ ಮಾಡಿದ್ರೆ ಸಿದ್ಧರಾಮಯ್ಯ ಮತ್ತೊಮೆ ಸಿಎಂ ಆಗಲಿ ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಶ್ರೀರಾಮುಲು, ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ. ನಾನು ಸಿದ್ಧರಾಮಯ್ಯ ವಿರೋಧಿ ಅಲ್ಲ. ಸಿದ್ಧರಾಮಯ್ಯ ಸಿಎಂ ಆಗಬೇಕೆಂಬ ಆಸೆ ನನಗೂ ಇದೆ. ನಾನು ಸಿಎಂ ಆಗಬೇಕೆಂಬುದನ್ನ ಸಿದ್ದರಾಮಯ್ಯ ಒಪ್ಪುತ್ತಾರೆ . ನಾನು ಸಿದ್ಧರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಿದ್ದವು. ಬಾದಾಮಿಯಲ್ಲಿ ಸಿದ್ಧರಾಮಯ್ಯ ಹೇಗೆ ಗೆದ್ದರು ಅವರನ್ನೇ ಕೇಳಿ. ಸಿದ್ಧರಾಮಯ್ಯ ನನ್ನ ದೋಸ್ತಿ ಬೇರೇನೆ ಇದೆ. ಭಗವಂತ ಆಶೀರ್ವಾದ ಮಾಡಿದ್ರೆ ಸಿದ್ಧರಾಯ್ಯ ಸಿಎಂ ಆಗಲಿ ಎಂದು ಶ್ರೀರಾಮುಲು ತಿಳಿಸಿದರು. : – - - --