ದಾವೋಸ್ ಪ್ರವಾಸದ ಬಗ್ಗೆ ಇಂದು ನಿರ್ಧರಿಸುತ್ತೇನೆ- ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಮೇ,14,2022(..):ದಾವೋಸ್ ಗೆ ಪ್ರವಾಸ ಕೈಗೊಳ್ಳುವ ಬಗ್ಗೆ ಇಂದು ನಿರ್ಧಾರ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದಾವೋಸ್ ಪ್ರವಾಸಕ್ಕೆ ಇಬ್ಬರು ಸಿಎಂಗೆ ಆಹ್ವಾನ ಬಂದಿದೆ. ಅದರಲ್ಲಿ ನಾನೂ ಒಬ್ಬ. ಹಾಗಾಗಿ ಇದು ಬಹಳ ಮುಖ್ಯವಾದ ಕಾರ್ಯಕ್ರಮ. ಆದರೆ ರಾಜ್ಯದ ವಿವಿಧ ಚುನಾವಣೆಗಳು ಬಂದಿವೆ. ಹಿಗಾಗಿ ಎಷ್ಟು ದಿನ ಯಾವತ್ತು ಪ್ರವಾಸ ಕೈಗೊಳ್ಳಬೇಕು. ಯಾವಾಗ ಹೋಗಬೇಕು ಎಂದು ಇಂದು ಮಧ್ಯಾಹ್ನ ತೀರ್ಮಾನ ಮಾಡುತ್ತೇನೆ ಎಂದರು. : – – – -- .