ದೇಶದ ಆರ್ಥಿಕತೆಗೆ ಡಾ.ಬಿ.ಆರ್ ಅಂಬೇಡ್ಕರ್ ಕೊಡುಗೆ ಅಪಾರ: ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು,ಮೇ,6,2022(..):ಸ್ವಾತಂತ್ರ್ಯದ ಮೊದಲು ಮತ್ತು ನಂತರ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬದಲಾವಣೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ಗಣನೀಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ. ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅರ್ಥಶಾಸ್ತ್ರ ವಿಭಾಗ ಆಯೋಜಿಸಿದ್ದ ‘ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಅಸ್ಪೃಶ್ಯ ಸಮುದಾಯದಿಂದ ಹುಟ್ಟಿ ಉನ್ನತ ಶಿಕ್ಷಣ ಪಡೆದ ಮೊದಲ ವಿದ್ವಾಂಸರೆಂದರೆ ಅದು ಅಂಬೇಡ್ಕರ್. ಭಾರತೀಯ ಇತಿಹಾಸದಲ್ಲಿ ಕ್ರಿಯಾಶೀಲ ವ್ಯಕ್ತಿ. ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ಕಾನೂನು ಪ್ರಕಾಶಕ, ಶಿಕ್ಷಣತಜ್ಞ, ಪತ್ರಕರ್ತರಾಗಿ ಕೊಡುಗೆ ನೀಡಿದ್ದಾರೆ. ಇವರ ಮೂರು ವಿದ್ವತ್ಪೂರ್ಣ ಪುಸ್ತಕಗಳನ್ನು ಮತ್ತು ಅರ್ಥಶಾಸದ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ ಎಂದರು. ಅಂಬೇಡ್ಕರ್ ಅವರು ತಮ್ಮ ಚಳುವಳಿಗಳ ಮೂಲಕ ಗ್ರಾಮೀಣ ಬಡವರ ಭೌತಿಕ ಮತ್ತು ಆರ್ಥಿಕ ಶೋಷಣೆಯ ಸಮಸ್ಯೆ ಒದಗಿಸಲು ಪ್ರಯತ್ನಿಸಿದರು. ಅವರಿಗೆ ಭಾರತೀಯ ಅರ್ಥಶಾಸ್ತ್ರಕ್ಕೆ ಹೊಸ ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನವನ್ನು ನೀಡುವ ಬಗೆ ಗೊತ್ತಿತ್ತು. ಬಡತನವನ್ನು ತೊಡೆದು ಹಾಕುವುದು ಮತ್ತು ಎಲ್ಲರಿಗೂ ಸಂಪನ್ಮೂಲಗಳ ಸಮಾನ ಪ್ರವೇಶವನ್ನು ಸಿಗುವಂತೆ ಮಾಡುವುದು ಅವರ ಕಲ್ಪನೆಯಾಗಿತ್ತು. ಅವರ ಸಿದ್ಧಾಂತಗಳನ್ನು ಈಗ ಆರ್ಥಿಕತೆಯ ಹಲವು ಕ್ಷೇತ್ರಗಳಲ್ಲಿ ಅಳವಡಿಸಲಾಗಿದೆ. ಅವರ ಕೆಲಸವು ಮಾರ್ಗದರ್ಶಿ ದಾಖಲೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು. ಅಂಬೇಡ್ಕರ್ ಅವರು ತಮ್ಮ ಅಧ್ಯಯನದ ಕ್ಷೇತ್ರದಲ್ಲಿ ಉದ್ಯೋಗಿ ಮತ್ತು ನಿರುದ್ಯೋಗಿಗಳು, ಪುರುಷರು ಮತ್ತು ಮಹಿಳೆಯರಿಗೆ ಉತ್ತಮ ಸೌಲಭ್ಯ ಸಿಗಬೇಕೆಂದು ಬಯಸಿದ್ದರು. ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲಾ ವರ್ಗಗಳು ಒಗ್ಗಟ್ಟಾಗಿ ಸಾಗಿದಾಗ ಸಮಾಜ ಬೆಳೆಯುತ್ತದೆ ಎಂಬ ತತ್ತ್ವ ಪ್ರತಿಪಾದಿಸಿದ್ದರು ಎಂದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಎನ್.ಮುನಿಯಪ್ಪ, ಇನ್ಸಿಟಿಟ್ಯೂಟ್ ‍ಫಾರ್ ಸೋಶಿಯಲ್ ಅಂಡ್ ಎಕನಾಮಿಕ್ ಚೇಂಚ್ ಮಾಜಿ ನಿರ್ದೇಶಕ ಪ್ರೊ.ಆರ್.ಎಸ್.ದೇಶಪಾಂಡೆ, ಅರ್ಥಶಾಸ್ತ್ರಜ್ಞ ಪ್ರೊ.ಎಸ್.ಮಾದೇಶ್ವರನ್ ಸೇರಿದಂತೆ ಇತರರು ಇದ್ದರು. : . - – -–. . … . .. : . . , 6, 2022 (..): “ . .. , , - ,” . . , -, . , “ ,” , , . “ , . . , , , , . .”“ , . . . . ,” . .. , . .. , . . .: / / . .. /