ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ: ಓಎಂಆರ್ ಶೀಟ್ ತಿದ್ದಿದ ಆರೋಪದಡಿ ಇಬ್ಬರ ಬಂಧನ. ಬೆಂಗಳೂರು,ಮೇ,6,2022(..):ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಓಎಂಆರ್ ಶೀಟ್ ತಿದ್ದಿದ ಆರೋಪದಡಿ ಇಬ್ಬರು ಆರೋಪಿಗಳನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಯಶವಂತ ಗೌಡ ಹಾಗೂ ಮಧು ಬಂಧಿತರು. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದವರ ಬಂಧನ ಮುಂದುವರೆಸಿದ್ದು, ಇಂದು ಕೂಡ ಇಬ್ಬರು ಅಭ್ಯರ್ಥಿಗಳನ್ನು ಓಎಂಆರ್ ಶೀಟ್ ತಿದ್ದಿದ ಆರೋಪದಡಿ ಬಂಧಿಸಿದ್ದಾರೆ. ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ಹೊರ ಬರುತ್ತಿದ್ದಂತೆ ಅಭ್ಯರ್ಥಿಗಳಾದ ಯಶವಂತ ಗೌಡ ಹಾಗೂ ಮಧು ನಾಪತ್ತೆಯಾಗಿದ್ದರು. ಈ ನಡುವೆ ಕಾರ್ಬನ್ ಓಎಂಆರ್ ಹಾಗೂ ಮೂಲಕ ಓಎಂಆರ್ ಪ್ರತಿಯಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ, ಇಬ್ಬರನ್ನು ಬಂಧಿಸಲಾಗಿದೆ. : - –- - -