ನಾಳೆ ರಾಷ್ಟ್ರೀಯ ಮೆಗಾ ಲೋಕ ಅದಾಲತ್, 10000 ಪ್ರಕರಣ ಇತ್ಯರ್ಥದ ಗುರಿ : ಪಿಡಿಜೆ 10k 13. 1.19 61345 58581 . 34667 . ಮೈಸೂರು,ಜು.12,2024: (..) ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜುಲೈ 13 ರಂದು ನಡೆಯಲಿರುವ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಲ್ಲಿ ಸುಮಾರು 10 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಿದೆ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮೈಸೂರಿನ ನೂತನ ನ್ಯಾಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ರವೀಂದ್ರ ಹೆಗಡೆ ಅವರಿಂದ ಮಾಹಿತಿ. ನಾಳೆ ಇಡಿ ದೇಶಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಮೈಸೂರಿನಲ್ಲಿಯು ಲೋಕ ಅದಾಲತ್ ಗೆ ಎಲ್ಲಾ ಸಿದ್ಧತೆ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 1.19 ಲಕ್ಷ ಪ್ರಕರಣಗಳು ವಿಚಾರಣೆಯಲ್ಲಿದ್ದು, ಅವುಗಳಲ್ಲಿ 61345 ಪ್ರಕರಣಗಳು ಕ್ರಿಮಿನಲ್ ಸ್ವರೂಪದ್ದಾಗಿವೆ ಮತ್ತು 58581 ಸಿವಿಲ್ ವ್ಯಾಜ್ಯಗಳಾಗಿವೆ. ಲೋಕ ಅದಾಲತ್ ನಲ್ಲಿ ಸುಮಾರು 34667 ಪ್ರಕರಣಗಳು ವಿಲೇವಾರಿಗೆ ಅರ್ಹವಾಗಿವೆ ಎಂದರು. ಸುಮಾರು 5300 ಪ್ರಕರಣಗಳಲ್ಲಿ ಪಕ್ಷಗಳು ವಿವಾದಗಳನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ ಆದರೆ ನಾವು ಸುಮಾರು ಕನಿಷ್ಠ 10000 ಪ್ರಕರಣಗಳನ್ನು ನಾಳಿನ ಲೋಕ ಅದಾಲತ್‌ ನಲ್ಲಿ ವಿಲೇವಾರಿ ಮಾಡುವ ಗುರಿ ಹೊಂದಿದ್ದೇವೆ ಎಂದರು. ಮುಡಾ ಪ್ರಕರಣಗಳು: ʼಮುಡಾʼ ದಿಂದ ಬಾಕಿ ಇರುವ ಸುಮಾರು ೨೦೬ ಭೂಸ್ವಾಧೀನ ಪರಿಹಾರ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಪಟ್ಟಿ ಮಾಡಲಾಗಿದೆ ಮತ್ತು ಅವುಗಳನ್ನು ಪರಿಹರಿಸುವ ಭರವಸೆಯಿದೆ. ಕಳೆದ ಬಾರಿ 27 ಪ್ರಕರಣಗಳನ್ನು ಪಟ್ಟಿ ಮಾಡಿದ್ದರೂ ಮುಡಾ ಹಾಜರಾಗಿರಲಿಲ್ಲ. ಮೈಸೂರು ನಗರದ 40 ನ್ಯಾಯಾಲಯಗಳು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 65 ನ್ಯಾಯಾಲಯಗಳಲ್ಲಿ ನಾಳೆ ಲೋಕ ಅದಾಲತ್ ನಡೆಯಲಿದೆ. ಸುಪ್ರೀಂ ಕೋರ್ಟ್ 33 ಪ್ರಕರಣಗಳನ್ನು ಇತ್ಯರ್ಥಕ್ಕೆ ಹಸ್ತಾಂತರಿಸಿದ್ದು, ಜುಲೈ 29 ರಿಂದ ಆಗಸ್ಟ್ 3 ರವರೆಗೆ ವಿಶೇಷ ಅಧಿವೇಶನಗಳಲ್ಲಿ ಈ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾದೀಶ ರವೀಂದ್ರ ಹೆಗಡೆ ತಿಳಿಸಿದರು. ಗುರಿ : ನಮಗೆ ಒಂದು ಲಕ್ಷ ಪ್ರಕರಣಗಳನ್ನ ಬಗೆಹರಿಸಬೇಕೆಂಬ ಉದ್ದೇಶವಿದೆ. ಈ ಎಲ್ಲಾ ಪ್ರಕರಣಗಳನ್ನ ಬಗೆಹರಿಸಲು ವಕೀಲರ ಪಾತ್ರ ಬಹುಮುಖ್ಯವಾಗಿದೆ. ಲೋಕ ಅದಾಲತ್ ನಲ್ಲಿ ಪ್ರಕರಣಗಳು ಇತ್ಯರ್ಥವಾಗುವುದರಿಂದ ಹಲವು ಲಾಭಗಳಿವೆ. ವೈಮನಸ್ಸು ಮರೆತು ಪರಸ್ಪರ ಒಬ್ಬರಿಗೊಬ್ಬರು ಸಂತೋಷದಿಂದ ಇರಬಹುದು ಎಂದು ನ್ಯಾಯಾದೀಶ ರವೀಂದ್ರ ಹೆಗಡೆ ಅಭಿಪ್ರಾಯಪಟ್ಟರು. ಪತ್ರಿಕಾಗೋಷ್ಠಿಯಲ್ಲಿ ನ್ಯಾಯಾಧೀಶರಾದ ಡಿ.ಪುಟ್ಟಸ್ವಾಮಿ, ಸಾವಿತ್ರಿ ಕುಜ್ಜಿ, ನಾಗರಾಜ್‌ ಅಂಕನದೊಡ್ಡಿ, ಕಾವ್ಯ, ಬಿ.ಜಿ.ದಿನೇಶ್‌ ಹಾಗೂ ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.‌ ಲೋಕೇಶ್‌, ಪ್ರಧಾನಕಾರ್ಯದರ್ಶಿ ಎ.ಜಿ. ಸುಧೀರ್‌ ಮತ್ತು ಉಪಾಧ್ಯಕ್ಷ ಚಂದ್ರಶೇಖರ್‌ ಹಾಜರಿದ್ದರು. : , , , 10,000 , , . : 10k 13. 1.19 61345 58581 . 34667 . 5300 ’ 10000 . 206 . 27 ’ . 65 40 , 33 29 3.