: ಕರ್ತವ್ಯ ಲೋಪ, ಸಬ್ ಇನ್ಸ್ಪೆಕ್ಟರ್ ಸಸ್ಪೆಂಡ್…! ಮೈಸೂರು, .30,2024: (..) ಮೈಸೂರು ಹೊರವಲಯದಲ್ಲಿ ರೇವ್ ಪಾರ್ಟಿ ಪ್ರಕರಣ. ಅನುಮತಿ ಇಲ್ಲದೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ್ದ ಸಬ್ ಇನ್ಸ್ಪೆಕ್ಟರ್ ಅಮಾನತು. ದಾಳಿ ವೇಳೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನಾಯಕ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಯುವಕರು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಇನ್ಸ್ಪೆಕ್ಟರ್ ಮುಂಜುನಾಥ್ ನಾಯಕ್. ಇದೀಗ ಕರ್ತವ್ಯ ಲೋಪ ಆರೋಪ ಮಂಜುನಾಥ್ ನಾಯಕ್ ಅಮಾನತು. ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನಾಯಕ್ ಅಮಾನತು. ಸಬ್ ಇನ್ಸ್ಪೆಕ್ಟರ್ ಅಮಾನತು ಮಾಡಿ ಎಸ್ಪಿ ವಿಷ್ಣುವರ್ಧನ್ ಆದೇಶ. ಮೈಸೂರಿನ ಮೀನಾಕ್ಷಿಪುರ ಸಮೀಪ ಕೆಆರ್ಎಸ್ ಹಿನ್ನೀರಿನಲ್ಲಿ ನಡೆದಿದ್ದ ಪಾರ್ಟಿ. ಅನುಮತಿ ಇಲ್ಲದೆ ಅನೈತಿಕ ನೃತ್ಯಕೂಟದಲ್ಲಿ ಭಾಗಿಯಾಗಿದ್ದ ಯುವಕ ಯುವತಿಯರು. ಶನಿವಾರ ರಾತ್ರಿ ನಡೆದಿದ್ದ ರೇವ್ ಪಾರ್ಟಿ. ಎಎಸ್ಪಿ ನಾಗೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿ ಯುವಕ ಯುವತಿಯರನ್ನ ವಶಕ್ಕೆ ಪಡೆಯಲಾಗಿತ್ತು. ಒಟ್ಟು 64 ಜನರ ಮೇಲೆ ಎಫೈಆರ್. ಐವರು ಆಯೋಜಕರು ನ್ಯಾಯಾಂಗ ಬಂಧನಕ್ಕೆ. ಉಳಿದವರಿಗೆ ನೋಟಿಸ್ ನೀಡಲಾಗಿತ್ತು. : , -, , : . - …! .