ಮೈಸೂರಿನಲ್ಲಿ ಮಾರ್ಚ್ 12 ರಂದು ಲೋಕ್ ಅದಾಲತ್ ಮೈಸೂರು, ಫೆಬ್ರವರಿ 22, 2022 (..):ಮೈಸೂರು ಜಿಲ್ಲೆಯಲ್ಲಿ ಮಾರ್ಚ್ 12 ರಂದು ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಲೋಕ್ ಅದಾಲತ್ ಅಯೋಜನೆ ಮಾಡಲಾಗಿದೆ. ಕಾನೂನು ಪ್ರಕಾರ ಸಂಧಾನದ ಮೂಲಕ ವಾಜ್ಯ ಇತ್ಯರ್ಥ ಮಾಡಲು ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದ ಜನರು ಹೆಚ್ಚು ಉಪಯೋಗ ಪಡೆಯಲಿ ಎಂಬ ಕಾರಣಕ್ಕಾಗಿ ಲೋಕ್ ಅದಾಲತ್ ಏರ್ಪಡಿಸಲಾಗಿದೆ. ಈ ಬಾರಿ ಮೋಟಾರು ವಾಹನ ಅಪಘಾತ ಪ್ರಕರಣಗಳು, ರಾಜಿಯಾಗದ ವಿಚ್ಚೇದನ ಪ್ರಕರಣಗಳು ಗಮನಕ್ಕೆ ಬಂದಿವೆ. ಇವುಗಳನ್ನು ಇತ್ಯರ್ಥಪಡಿಸಲಾಗುವುದು. ಅದಾಲತ್’ಗೆ ವಕೀಲ ಸಂಘ ಬೆಂಬಲ‌ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ತಿಳಿಸಿದ್ದಾರೆ.