ಕೊರೋನಾ ನಂಬರ್ ಹೆಚ್ಚಾದ್ರೂ ಪರಿಣಾಮ ಕಡಿಮೆ: ಎಲ್ಲವನ್ನೂ ಚರ್ಚಿಸಿ ನಿರ್ಧಾರ- ಸಿಎಂ ಬಸವರಾಜ ಬೊಮ್ಮಾಯಿ. ಬೆಂಗಳೂರು,ಜನವರಿ,22,2022(..):ಕೊರೋನಾ ನಂಬರ್ ಹೆಚ್ಚಾದರೂ ಪರಿಣಾಮ ಕಡಿಮೆ ಇದೆ. ಜೀವ ಉಳಿಯಬೇಕು ಜೀವನ ಉಳಿಯಬೇಕು ಎಲ್ಲಾವನ್ನ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೋವಿಡ್ ಯಾರನ್ನ ಬಿಟ್ಟಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಕೊರೊನಾ ಅಷ್ಟೊಂದು ತೀವ್ರವಾಗಿರಲಿಕ್ಕಿಲ್ಲ. ಅವರ ಕುಟುಂಬದ ಜತೆ ಮಾತನಾಡುತ್ತೇನೆ ಎಂದರು. ಜಲ ವಿವಾದ ವಿಚಾರ ಸಂಬಂಧ ವರ್ಚುವಲ್ ಕಾನ್ಫರೆನ್ಸ್ಇದೆ. ಜಲವಿವಾದ ಸಂಬಂಧ ಹಲವು ಸಭೆಗಳನ್ನ ನಡೆಸಿದ್ದೇನೆ. ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಭೆ ನಡೆಸಿದ್ದೇನೆ ಎಂದರು. : -- – -