ಮೈಸೂರು ಬಾರ್‌ ಅಸೋಷಿಯೇಷನ್‌ ವಿನೂತನ ಹೆಜ್ಜೆ : ಒಂದು ತಿಂಗಳು ನಿರಂತರ ʼ ಕಾನೂನು ಕಾರ್ಯಗಾರʼ. ಮೈಸೂರು, ಜೂ.26,2024 : (..) ಮುಂದಿನ ತಿಂಗಳಿಂದ ದೇಶದಲ್ಲಿ ಹೊಸ ಕ್ರಿಮಿನಲ್‌ ಕಾನೂನು ಜಾರಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘದ ವತಿಯಿಂದ ವಿಶೇಷ ಕಾರ್ಯಗಾರ ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಮೈಸೂರು ಬಾರ್‌ ಅಸೋಸಿಯೇಷನ್‌ ಸಭಾಂಗಣದಲ್ಲಿ ಇಂದು ನಡೆದ ʼಕಾನೂನು ಕಾರ್ಯಗಾರʼ ವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ರವೀಂದ್ರ ಹೆಗಡೆ ಉದ್ಘಾಟಿಸಿದರು. ಜುಲೈ 1 ರಿಂದ ಜಾರಿಗೆ ಬರಲಿರುವ ನೂತನ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅವಶ್ಯಕ. ಅದರಲ್ಲೂ ಕಾನೂನು ಪ್ರ್ಯಾಕ್ಟೀಸ್‌ ಮಾಡುವ ವಕೀಲರಿಗೆ ಈ ಬಗ್ಗೆ ತಿಳುವಳಿಕೆ ಅತ್ಯಾವಶ್ಯಕ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘ ಇಂದಿನಿಂದ ಒಂದು ತಿಂಗಳುಗಳ ಕಾಲ ನಿರಂತರ ʼ ಕಾನೂನು ಕಾರ್ಯಗಾರ ʼ ನಡೆಸುತ್ತಿರುವುದು ಶ್ಲಾಘನೀಯ ಎಂದರು.‌ ನಾಯಾಧೀಶರಾದ ರವೀಂದ್ರ ಹೆಗಡೆ ಅವರು ಸರಿ ಸುಮಾರು ಒಂದುವರೆ ಗಂಟೆಗಳ ಕಾಲ ನೂತನ ಕ್ರಿಮಿನಲ್‌ ಕಾನೂನು ಸಂಬಂದ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಮೈಸೂರು ಬಾರ್‌ ಅಸೋಷಿಯೇಷನ್‌ ಅಧ್ಯಕ್ಷ, ಹಿರಿಯ ವಕೀಲ ಎಸ್. ಲೋಕೇಶ್‌ ಮಾತನಾಡಿ, ಜುಲೈ 1, 2024ರಿಂದ ಭಾರತದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರುತ್ತಿವೆ: ಭಾರತೀಯ ನ್ಯಾಯ ಸಂಹಿತಾ (), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (), ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (). ಇವು ಹಳೆಯ ಭಾರತೀಯ ದಂಡ ಸಂಹಿತಾ (), ಕ್ರಿಮಿನಲ್ ಪ್ರೊಸೀಜರ್ ಕೋಡ್ (), ಮತ್ತು ಭಾರತೀಯ ಸಾಕ್ಷ್ಯಾಧಿನಿಯಮವನ್ನು () ಬದಲಿಸುತ್ತವೆ ಎಂದರು. ಮುಖ್ಯ ಬದಲಾವಣೆಗಳು: – ಹಿಂದಿನ 511 ಸೆಕ್ಷನ್‌ಗಳ ಬದಲು ಈಗ 358 ಸೆಕ್ಷನ್‌ಗಳನ್ನು ಒಳಗೊಂಡಿದೆ. – 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ. – 33 ಅಪರಾಧಗಳ ಶಿಕ್ಷೆಯ ಅವಧಿ ಹೆಚ್ಚಿಸಲಾಗಿದೆ. – 83 ಅಪರಾಧಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. – 23 ಅಪರಾಧಗಳಿಗೆ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ಪರಿಚಯಿಸಲಾಗಿದೆ. – 19 ಸೆಕ್ಷನ್‌ಗಳನ್ನು ರದ್ದುಪಡಿಸಲಾಗಿದೆ. – ಹಿಂದಿನ 484 ಸೆಕ್ಷನ್‌ಗಳ ಬದಲು 531 ಸೆಕ್ಷನ್‌ಗಳನ್ನು ಹೊಂದಿದೆ. – 177 ಕಲ್ಮಶಗಳನ್ನು ಬದಲಾಯಿಸಲಾಗಿದೆ ಮತ್ತು 9 ಹೊಸ ಸೆಕ್ಷನ್‌ಗಳು ಸೇರಿಸಲ್ಪಟ್ಟಿವೆ. – 44 ಹೊಸ ಕಲ್ಮಶಗಳು ಮತ್ತು ಸ್ಪಷ್ಟೀಕರಣಗಳು ಸೇರಿಸಲ್ಪಟ್ಟಿವೆ. – 35 ಸೆಕ್ಷನ್‌ಗಳಲ್ಲಿ ಸಮಯ ನಿರ್ಧಾರ ಮತ್ತು ಆಡಿಯೋ-ವಿಡಿಯೋ ವ್ಯವಸ್ಥೆಯನ್ನು ಸೇರಿಸಲಾಗಿದೆ. – 14 ಸೆಕ್ಷನ್‌ಗಳನ್ನು ರದ್ದುಪಡಿಸಲಾಗಿದೆ. – ಹಿಂದಿನ 166 ಸೆಕ್ಷನ್‌ಗಳ ಬದಲು 170 ಸೆಕ್ಷನ್‌ಗಳನ್ನು ಹೊಂದಿದೆ. – 24 ಕಲ್ಮಶಗಳನ್ನು ಬದಲಾಯಿಸಲಾಗಿದೆ. – 2 ಹೊಸ ಕಲ್ಮಶಗಳು ಮತ್ತು 6 ಉಪ-ಕಲ್ಮಶಗಳು ಸೇರಿಸಲ್ಪಟ್ಟಿವೆ. – 6 ಸೆಕ್ಷನ್‌ಗಳನ್ನು ರದ್ದುಪಡಿಸಲಾಗಿದೆ. ಈ ಹೊಸ ಕಾನೂನುಗಳು ಅಪರಾಧ, ನ್ಯಾಯ, ಮತ್ತು ಸಾಕ್ಷ್ಯಾಧಾರದ ವ್ಯವಹಾರಗಳನ್ನು ಸುಧಾರಿಸಲು ಮತ್ತು ತ್ವರಿತ ನ್ಯಾಯ ನೀಡಲು ಸಹಾಯ ಮಾಡುತ್ತವೆ ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎ.ಜಿ. ಸುಧೀರ್‌, ಉಪಾಧ್ಯಕ್ಷ ಎಂ.ವಿ. ಚಂದ್ರಶೇಖರ್‌ ಹಾಗೂ ಪದಾಧಿಕಾರಿಗಳು ಮತ್ತು ಹಿರಿಯ ವಕೀಲ ವೃಂದ ಹಾಜರಿದ್ದರು. : , , , : 1, 2024, : (), (),