ವಿಧಿವಶವಾದೆಯಾ ಅರಿಯುವ ಮುನ್ನವೇ… ಬೆಂಗಳೂರು,ಅಕ್ಟೋಬರ್,29,2021(..):ಕನ್ನಡ ಚಿತ್ರರಂಗದಲ್ಲಿ ಅಪ್ಪು, ಪವರ್ ಸ್ಟಾರ್ ಎಂದೇ ಖ್ಯಾತರಾಗಿದ್ಧ ನಟ ಪುನೀತ್ ರಾಜ್ ಕುಮಾರ್ ಇಂದು ಬಾರದ ಲೋಕಕ್ಕೆ ಪಯಣಿಸಿದ್ದು, ಇಡೀ ಕರುನಾಡಿಗೆ ಇದು ಕರಾಳ ದಿನ. ಪುನೀತ್​ ರಾಜ್ ​ಕುಮಾರ್​ ಇನ್ನಿಲ್ಲ ಎಂಬ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಲೇ ಇಲ್ಲ. ಅಪ್ಪು ಅಗಲಿಕೆಯಿಂದ ಇಡೀ ಕನ್ನಡ ಚಿತ್ರರಂಗವೇ ಶೋಕಸಾಗರದಲ್ಲಿ ಮುಳುಗಿದೆ. ಫಿಟ್ನೆಸ್ ​ಗೆ ಹೆಚ್ಚು ಕಾಳಜಿ ನೀಡುತ್ತಿದ್ದ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಮೃತರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಅಪ್ಪು ಇಹಲೋಕ ತ್ಯಜಿಸಿರುವುದು ತೀವ್ರ ನೋವಿನ ಸಂಗತಿ. ಚಿಕ್ಕ ವಯಸ್ಸಿನಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದ ಪುನೀತ್​ ಅವರು ಸ್ಯಾಂಡಲ್​ವುಡ್​ಗೆ ನೀಡಿದ ಕೊಡುಗೆ ಅಪಾರ. ಅವರ ಸಿನಿಮಾ ಜರ್ನಿ ನೋಡಿದರೆ ಎಷ್ಟೋ ಜನರಿಗೆ ಸ್ಫೂರ್ತಿ ಆಗುವಂಥದ್ದು. ಅವರು ಸಾಗಿ ಬಂದ ಬಣ್ಣ ಬದುಕಿನ ಪಯಣ ಹೀಗಿತ್ತು… ಜನನ : 17 ಮಾರ್ಚ್,1975 ನಟ ಪುನೀತ್ ರಾಜ್ ಕುಮಾರ್ ಅವರು ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರ ಕಿರಿಯ ಪುತ್ರನಾಗಿ 17 ಮಾರ್ಚ್ 1975 ರಂದು ಜನಿಸಿದರು. ನಂತರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ನಟ ಪುನೀತ್ ರಾಜ್ ಕುಮಾರ್, ಬಾಲನಟ, ನಾಯಕ ನಟ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ. ಬಾಲನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ಧ ‘ಪವರ್ ಸ್ಟಾರ್’ 1985ರಲ್ಲಿ ತೆರೆಕಂಡಿದ್ಧಬೆಟ್ಟದ ಹೂವುಚಿತ್ರದಲ್ಲಿ ರಾಮು ಪಾತ್ರದ ಬಾಲನಟನೆಗೆ ಪುನೀತ್ ರಾಜ್ ಕುಮಾರ್ ಅವರು ‘ರಾಷ್ಟ್ರ ಚಲನಚಿತ್ರ ಪ್ರಶಸ್ತಿ’ ಪಡೆದಿದ್ದರು. 28 ಚಲನಚಿತ್ರಗಳಲ್ಲಿ ಪುನೀತ್ ರಾಜ್ ಕುಮಾರ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆರಾಜಕುಮಾರ್ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981),ಚಲಿಸುವ ಮೋಡಗಳು(1982),ಎರಡು ನಕ್ಷತ್ರಗಳು(1983) ಮತ್ತುಬೆಟ್ಟದ ಹೂವು(1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು. ಪುನೀತ್ ಮೊದಲು ನಾಯಕ ನಟನಾಗಿ ಪ್ರಮುಖ ಪಾತ್ರದಲ್ಲಿ 2002′ ಅಪ್ಪು ರಲ್ಲಿ ಅಭಿನಯಿಸಿದರು. ಅವರ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. .ಅವರು ಪ್ರಸಿದ್ಧ ಟಿವಿ ಪ್ರದರ್ಶನಕನ್ನಡದ ಕೋಟ್ಯಧಿಪತಿ,ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ. ಬಾಲನಟನಾಗಿ ಅಭಿನಯಿಸಿದ ಚಿತ್ರಗಳು. ನಟ ಪುನೀತ್ ರಾಜ್ ಕುಮಾರ್ ಅವರುಪ್ರೇಮದ ಕಾಣಿಕೆ,ಭಾಗ್ಯವಂತ,ಎರಡು ನಕ್ಷತ್ರಗಳು,ಬೆಟ್ಟದ ಹೂವು,ಚಲಿಸುವ ಮೋಡಗಳು,ಶಿವ ಮೆಚ್ಚಿದ ಕಣ್ಣಪ್ಪ,ಪರಶುರಾಮ್,ಯಾರಿವನು,ಭಕ್ತ ಪ್ರಹ್ಲಾದ,ವಸಂತ ಗೀತಚಿತ್ರದಲ್ಲಿ ಬಾಲನಟರಾಗಿ ನಟಿಸಿದ್ದಾರೆ. : - - -