ಕರ್ನಾಟಕದ ಸ್ಥಳ ಪುರಾಣ ಬಿಂಬಿಸುವ ಗೊಂಬೆಗಳೆಲ್ಲಿವೆ…? ಬೆಂಗಳೂರು, ಅಕ್ಟೋಬರ್ ೧5, ೨೦೨೧ ( .. ): ಬೆಂಗಳೂರು ಮಹಾನಗರದಲ್ಲಿ ಹಲವು ದಶಕಗಳಿಂದ ಗೊಂಬೆಗಳ ಮಾರಾಟದಲ್ಲಿ ತೊಡಗಿರುವ ನಾಗಲಕ್ಷ್ಮೀ ಹನುಮಂತಪ್ಪ ಅವರಿಗೆ ಒಂದು ಕೊರಗಿದೆ. ಅದೇನೆಂದರೆ ಆಕೆಗೆ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ, ಚರಿತ್ರೆ ಹಾಗೂ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ‘ಕನ್ನಡ’ದ ಗೊಂಬೆಗಳನ್ನು ಮಾರಾಟ ಮಾಡಬೇಕೆಂಬ ಬಯಕೆ. ಆದರೆ ನಮ್ಮ ರಾಜ್ಯದಲ್ಲಿ ಅಂತಹ ಗೊಂಬೆಗಳ ತಯಾರಕರೇ ಇಲ್ಲವಂತೆ. ಬಹುಪಾಲು ಗೊಂಬೆಗಳು ತಮಿಳುನಾಡಿನಲ್ಲಿ ತಯಾರಾಗಿ ಅಲ್ಲಿಂದಲೇ ಇಲ್ಲಿಗೆ ಬರುತ್ತಿವೆಯಂತೆ. ಇಲ್ಲಿ ಆಕೆ ನಮ್ಮ ಚನ್ನಪಟ್ಟಣದ ಗೊಂಬೆಗಳನ್ನು ಉಲ್ಲೇಖಿಸುತ್ತಿಲ್ಲ. ಆದರೆ ಆಕೆಗೆ ಜೇಡಿ ಮಣ್ಣು, ಕಾಗದ, ಪ್ಯಾರಿಸಿಯನ್ ಪ್ಲಾಸ್ಟರ್ ಹಾಗೂ ಬಣ್ಣ ಬಣ್ಣದ ಸಿಮೆಂಟ್ನಿAದ ತಯಾರಿಸಿರುವ ಕರ್ನಾಟಕದ ಸಂಪ್ರದಾಯವನ್ನು ಬಿಂಬಿಸುವ ಗೊಂಬೆಗಳನ್ನು ಮಾರಾಟ ಮಾಡಲು ಬಯಸುತ್ತಿದ್ದಾರೆ. ಗಾಂಧಿ ಬಜಾರ್ನಲ್ಲಿರುವ ಆಕೆಯ ಎನ್.ಹೆಚ್. ದಸರಾ ಗೊಂಬೆಗಳ ಅಂಗಡಿ ಎಂಬ ಹೆಸರಿನ ಮಳಿಗೆ ಕಳೆದ ೩೪ ವರ್ಷಗಳಿಂದ ಗೊಂಬೆಗಳ ಮಾರಾಟದಲ್ಲಿ ತೊಡಗಿದೆ. ಕೆಳಮಹಡಿಯಲ್ಲಿರುವ ಈ ಅಂಗಡಿಯಲ್ಲಿ ಪುರಾಣ ಕಥೆಗಳನ್ನು ಬಿಂಬಿಸುವ ನೂರಾರು ಗೊಂಬೆಗಳಿವೆ.ನಾಗಲಕ್ಷ್ಮೀ ಅವರು ಓರ್ವ ಬಹಳ ಕ್ರಿಯಾಶೀಲ, ಸ್ನೇಹಮಯಿ ಹಾಗೂ ಬುದ್ಧಿವಂತ ಮಹಿಳೆ. ಈಕೆ ರಾಮಾಯಣ ಹಾಗೂ ಮಹಾಭಾರತದಂತಹ ಪುರಣಾ ಕಥೆಗಳನ್ನು ಅತ್ಯಂತ ನಿರರ್ಗಳವಾಗಿ ಹೇಳಬಲ್ಲರು. “ಕರ್ನಾಟಕದಲ್ಲಿ ಈಗ ಯಾರೂ ದಸರಾ ಗೊಂಬೆಗಳನ್ನೇ ತಯಾರಿಸುವವರಿಲ್ಲ. ತಮಿಳುನಾಡಿನಲ್ಲಿ ಗೊಂಬೆಗಳನ್ನು ತಯಾರಿಸುವ ಗುಚ್ಛಪ್ರದೇಶವಿದೆ. ಈ ಗೊಂಬೆಗಳೆಲ್ಲ ಮಧುರೈ, ಕಡಲೂರು, ಚೆನ್ನೈ, ನಾಗರ್ಕೋಯಿಲ್, ಪಾಂಡಿ, ಇತ್ಯಾದಿ ಪ್ರದೇಶಗಳಿಂದ ಬರುತ್ತವೆ. ಈ ಗೊಂಬೆಗಳೆಲ್ಲಾ ತಮಿಳಿಗರ ಸಂಸ್ಕೃತಿ, ಅವರ ಸಂಪ್ರದಾಯ ಹಾಗೂ ಪುರಣಾಗಳನ್ನೇ ಬಿಂಬಿಸುತ್ತವೆ. ಆದರೆ ಕರ್ನಾಟಕದ ಸ್ಥಳ ಪುರಾಣವನ್ನು ಬಿಂಬಿಸುವ ಗೊಂಬೆಗಳೆಲ್ಲಿವೆ? ನಮ್ಮ ನೆರೆಯ ರಾಜ್ಯದವರ ಸಂಪ್ರದಾಯಗಳೇ ಬೇರೆ. ನಾವು ಉಡುವಂತಹ ಸೀರೆಗಳು, ಪಂಚೆಗಳು ಅಥವಾ ಹಣೆಯ ಮೇಲೆ ಇಡುವ ಕುಂಕುಮದ ರೀತಿಯೇ ಇತರರಿಗಿಂತ ಭಿನ್ನ. ನಮ್ಮ ರಾಜ್ಯಕ್ಕೆ ನಮ್ಮದೇ ಆದಂತಹ ವಿಶೇಷ ಶೈಲಿ ಇದೆ. ಕರ್ನಾಟಕದಲ್ಲಿ ಅನೇಕ ಕಥೆಗಳಿವೆ. ಆದರೆ ದುರಾದೃಷ್ಟವಶಾತ್ ನಾವು ಇಲ್ಲಿ ಮಾರಾಟ ಮಾಡುತ್ತಿರುವಂತಹ ಗೊಂಬೆಗಳು ಇದನ್ನು ಬಿಂಬಿಸುವುದಿಲ್ಲ. ಹಾಗಾಗಿ, ನಮ್ಮ ಕನ್ನಡದ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವಂತಹ ಗೊಂಬೆಗಳು ನಮಗೆ ಬೇಕು,” ಎನ್ನುತ್ತಾರೆ. ಪುರಾಣ ಕಥೆಗಳು ಹಾಗೂ ಗೊಂಬೆಗಳ ಬಗ್ಗೆ ನಾಗಲಕ್ಷ್ಮೀ ಅವರಿಗಿರುವ ಪ್ರೀತಿ ಅಪಾರ. ಆಕೆ ತನಗೆ ಬೇಕಾದಂತಹ ಗೊಂಬೆಗಳನ್ನು ತಯಾರಿಸಿಕೊಡುವಂತೆ ತಮಿಳುನಾಡಿನ ಕರಕುಶಲಕರ್ಮಿಗಳಿಗೆ ಸೂಚನೆಗಳನ್ನು ನೀಡುತ್ತಿರುತ್ತಾರಂತೆ. “ನಾನು ಇತ್ತೀಚೆಗೆ ಉಡುಪಿಯ ಕೃಷ್ಣನ ಒಂದು ಚಿತ್ರವನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ತಮಿಳುನಾಡಿನ ಓರ್ವ ಕರಕುಶಲಕರ್ಮಿಗೆ ಕಳುಹಿಸಿದೆ. ಆತ ಆ ಚಿತ್ರವನ್ನು ನೋಡಿಕೊಂಡು ನನ್ನ ಅಗತ್ಯದ ಪ್ರಕಾರ ಗೊಂಬೆಯನ್ನು ತಯಾರಿಸಿ ಕಳುಹಿಸಿದರು. ಆತ ನನಗಾಗಿ ಜೇಡಿಮಣ್ಣಿನಿಂದ ಮಾಡಿರುವ ಶ್ರೀಕೃಷ್ಣನ ಗೊಂಬೆಗಳನ್ನು ತಯಾರಿಸಿ ಕಳುಹಿಸಿದ. ಅದೇ ರೀತಿ ಪುರಂದರ ದಾಸರು ಹಾಗೂ ತ್ಯಾಗರಾಜರ ಚಿತ್ರಗಳನ್ನೂ ಕಳುಹಿಸಿ ಅದೇ ರೀತಿಯ ಗೊಂಬೆಗಳನ್ನು ಸಿದ್ಧಪಡಿಸಿಕೊಡುವಂತೆ ಕೇಳಿದೆ. ದಸರಾ ಮೆರವಣಿಗೆಯ ವಿಷಯವನ್ನು ಆಧರಿಸಿದ ಗೊಂಬೆಗಳ ಸೆಟ್ ಅನ್ನು ತರಿಸಿಕೊಂಡಿರುವೆ. ಆದರೆ ದುರಾದೃಷ್ಟವಶಾತ್ ನನ್ನ ಕಲ್ಪನೆಗಳನ್ನು ಇತರೆ ಕರಕುಶಲಕರ್ಮಿಗಳು ನಕಲು ಮಾಡಿ ಬಳಸಿಕೊಳ್ಳುತ್ತಿದ್ದಾರೆ. ನನಗೆ ನನ್ನದೇ ಆದ ವೈಶಿಷ್ಟ್ಯತೆಯೇ ಇಲ್ಲದಂತಾಗಿದೆ. ಹಾಗಾಗಿ ಕರ್ನಾಟಕದಲ್ಲಿ ಯಾರಾದರೂ ಕರಕುಶಲಕರ್ಮಿಗಳು ಈ ರೀತಿ ನನಗೆ ಗೊಂಬೆಗಳನ್ನು ತಯಾರಿಸಿ ಕೊಟ್ಟರೆ ಅನುಕೂಲವಾಗಬಹುದು,” ಎನ್ನುತ್ತಾರೆ ನಾಗಲಕ್ಷ್ಮೀ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸಾಂಕ್ರಾಮಿಕವೂ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಗೊಂಬೆಗಳ ಬೆಲೆಗಳೂ ಸಹ ಬಹಳ ಹೆಚ್ಚಾಗಿದೆ. ಒಂದು ಉತ್ತಮ ಗೊಂಬೆಗಳ ಪ್ಯಾಕೇಜ್ ದರ ರೂ.೧,೮೦೦ ರಿಂದ ರೂ.೩೦,೦೦೦ದವರೆಗೂ ಇದೆ. ನಾಗಲಕ್ಷ್ಮೀ ಅವರ ಪತಿ ಹಾಗೂ ಆಕೆಯ ಇಬ್ಬರು ಇಂಜಿನಿಯರಿಂಗ್ ಪದವೀಧರರು ವ್ಯಾಪಾರದಲ್ಲಿ ಆಕೆಗೆ ನೆರವಾಗುತ್ತಿದ್ದಾರೆ. ಆಕೆ ಮಳಿಗೆಗೆ ಮಾಸಿಕ ರೂ.೩೦,೦೦೦ ಬಾಡಿಗೆ ಪಾವತಿಸುತ್ತಿದ್ದಾರೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಗೊಂಬೆಗಳನ್ನು ಶೇಖರಿಸಿಡಲು ಮತ್ತೊಂದು ದಾಸ್ತಾನು ಮಳಿಗೆ (ಗೋಡೌನ್)ಗೂ ಬಾಡಿಗೆ ಪಾವತಿಸಬೇಕು. ನಾಗಲಕ್ಷ್ಮೀ ಅವರ ಕುಟುಂಬ ಈ ವ್ಯಾಪಾರವನ್ನು ಲಾಭಕ್ಕಾಗಿ ನಡೆಸದೆ, ತಮ್ಮ ಆಸಕ್ತಿಯಿಂದಾಗಿ ಮುಂದುವರೆಸಿಕೊಂಡು ಹೋಗುತ್ತಿದೆಯಂತೆ. : ---- : , , . ‘’ ’ , , , . ’ . . . , , , . 34 . . , , . “ . - . , , , , , . , . ’ ? . , . . ’ . , ’ . ,” . ’ . . “ . . ’ . ’ ’ . - . , . . , “ . , . 1,800 30,000. ’ 2 . 30,000 , . , .