ದಾವಣಗೆರೆಯಲ್ಲಿ ಬಸವರಾಜ ಬೊಮ್ಮಾಯಿಗೆ ವಿಶೇಷ ಉಡುಗೊಡೆ ನೀಡಿದ ಕಲಾವಿದ ! ಕಲಾ ನೈಪುಣ್ಯತೆಗೆ ಶರಣೆಂದ ಸಿಎಂ ದಾವಣಗೆರೆ, ಸೆಪ್ಟೆಂಬರ್ 19, 2021 (..):ದಾವಣಗೆರೆಗೆ ಭೇಟಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಕಲಾವಿದರೊಬ್ಬರ ಕಲಾನೈಪುಣ್ಯತೆ ಕಂಡು ಬೆರಗಾಗಿದ್ದಾರೆ. ಸ್ಥಳೀಯ ಕಲಾವಿದರೊಬ್ಬರಯ ಬಾಯಿಯಲ್ಲಿ ಕುಂಚವನ್ನು ಹಿಡಿದು ಬಿಡಿಸಿದ್ದ ಬಸವರಾಜ್ ಬೊಮ್ಮಾಯಿ ಅವರ ಚಿತ್ರವನ್ನು ಪ್ರೀತಿಯಿಂದ ಸಿಎಂಗೆ ಕಾಣಿಕೆಯಾಗಿ ನೀಡಿದ್ದಾರೆ. ಹರಿಹರದ ಜಯಕುಮಾರ್ ದಾವಣಗೆರೆಯಲ್ಲಿ ತಾವು ಬಿಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಸ್ತಾಂತರಿಸಿದರು. ಕಲಾವಿದನ ಕೌಶಲ್ಯ ಕಂಡು ಸಿಎಂ ಬೆರಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಾವಿದನ ಕೌಶಲ್ಯ ಕಂಡ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಕೂಡ ಕ್ಷಣಕಾಲ ಬೆರುಗಾದರು. : , -