ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ತಮಿಳುನಾಡಿನಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು. ಮೈಸೂರು,ಸೆಪ್ಟಂಬರ್,2,2021(..): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನ ತಮಿಳುನಾಡಿಗೆ ಕರೆದೊಯ್ದು ಸ್ಥಳಮಹಜರು ನಡೆಸಿದ್ದಾರೆ. ಮೂವರು ಆರೋಪಿಗಳೊಡನೆ ತೆರಳಿ ಪೊಲೀಸರು ತಿರುಪೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಇದೇ ವೇಳೆ ಪೊಲೀಸರು ಕೆಲವು ಬಟ್ಟೆ ಗಳನ್ನು ಸೀಜ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ 6 ಮಂದಿಯನ್ನ ಬಂಧಿಸಲಾಗಿದ್ದು 7ನೇ ಆರೋಪಿ ತಲೆ ಮರಿಸಿಕೊಂಡಿದ್ದಾನೆ. ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಮಹಜರಿಗೆ ತೆರಳಿರುವ ಪೊಲೀಸರ ತಂಡ ಸದ್ಯ ತಮಿಳುನಾಡಿನಲ್ಲೆ ಇದ್ದಾರೆ. : - –- – -