ಭಯೋತ್ಪಾದನೆ ಬಲದಿಂದ ಸಾಮ್ರಾಜ್ಯ ಕಟ್ಟಲು ಸಾಧ್ಯವಿಲ್ಲ- ಪ್ರಧಾನಿ ನರೇಂದ್ರ ಮೋದಿ. ನವದೆಹಲಿ,ಆಗಸ್ಟ್,20,2021(..):ಭಯೋತ್ಪಾದನೆ ಬಲದಿಂದ ಸಾಮ್ರಾಜ್ಯ ಕಟ್ಟಲು ಸಾಧ್ಯವಿಲ್ಲ. ಒಂದು ವೇಳೆ ಕಟ್ಟಿದರೂ ಅವರ ಅಸ್ತಿತ್ವ ಬಹಳ ದಿನ ಉಳಿಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಭಯೋತ್ಪಾದಕ ಶಕ್ತಿಗಳು ಕೆಲ ಕಾಲ ಮಾತ್ರ ಮೆರೆದಾಡಬಹುದು. ತಮ್ಮ ಸಾಮ್ರಾಜ್ಯ ಸ್ಥಾಪಿಸಲು ಉಗ್ರ ಮಾರ್ಗ ಅನುಸರಿಸಬಹುದು ಆದರೆ ಅವರ ಅಸ್ತಿತ್ವ ಶಾಶ್ವತವಲ್ಲ. ಕಾಲಘಟ್ಟದಲ್ಲಿ ಅವರು ಮಾನವೀಯತೆ ಮೆಟ್ಟಿ ನಿಲ್ಲಲು ಆಗಲ್ಲ ಎಂದರು. ಒಂದು ಕಾಲದಲ್ಲಿ ಸೋಮನಾಥ ದೇಗುಲವನ್ನ ಇಂಥವರೇ ಕೆಡವಿದ್ರು. ಈಗ ಅಂತವರ ಶಕ್ತಿಯಿಂದ ಜಗತ್ತು ಆತಂಕ ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದರು. : - - – – – - .