ದ್ವಿತ್ವ ಚಿತ್ರಕ್ಕೆ ತ್ರಿಷಾ ನಾಯಕಿ, ಅಪ್ಪು ಜೊತೆ ಮತ್ತೊಮ್ಮೆ ತೆರೆ ಮೇಲೆ ಡ್ಯುಯೆಟ್ ! ಬೆಂಗಳೂರು, ಆಗಸ್ಟ್ 4, 2021 (..):ಅಪ್ಪು ಸಿನಿಮಾಗೆ ಎರಡನೇ ಬಾರಿ ನಾಯಕಿಯಾಗಿ ನಟಿ ತ್ರಿಷಾ ಕೃಷ್ಣನ್ ಆಯ್ಕೆಯಾಗಿದ್ದಾರೆ. ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡುತ್ತಿರುವ “ದ್ವಿತ್ವ” ಚಿತ್ರಕ್ಕೆ ತ್ರಿಷಾ ಕೃಷ್ಣನ್‌ ಅವರನ್ನು ಕರೆತರಲಾಗಿದೆ. ಹೊಂಬಾಳೆ ಫಿಲಂಸ್ ಸಂಸ್ಥೆ ಟ್ವಿಟ್ಟರ್‌ ಖಾತೆಯಲ್ಲಿ “ದ್ವಿತ್ವ” ಚಿತ್ರದ ನಾಯಕಿ ತ್ರಿಷಾ ಕೃಷ್ಣನ್‌ಗೆ ಸುಸ್ವಾಗತ ಎಂದು ಟ್ವೀಟ್ ಮಾಡುವ ಮೂಲಕ ಅಧಿಕೃತ ಘೋಷಣೆ ಮಾಡಲಾಗಿದೆ. ಈ ಹಿಂದೆ ತ್ರಿಷಾ “ಪವರ್” ಚಿತ್ರದ ಮೂಲಕ ಅಪ್ಪು ಜತೆ ಸ್ಯಾಂಡಲ್ ವುಡ್ ಗೆ ತ್ರಿಷಾ ಎಂಟ್ರಿ ಕೊಟ್ಟಿದ್ದರು.