ಇಂದು ನಡೆಯಬೇಕಿದ್ಧ ಭಾರತ-ಶ್ರೀಲಂಕಾ ಟಿ20 ಎರಡನೇ ಪಂದ್ಯ ಮುಂದೂಡಿಕೆ. ಕೊಲೊಂಬೊ,ಜುಲೈ,27,2021(..):ಇಂದು ನಡೆಯಬೇಕಿದ್ಧ ಭಾರತ- ಶ್ರೀಲಂಕಾ ನಡುವಿನ 2ನೇ ಟಿ20 ಪಂದ್ಯಾವಳಿ ಮುಂದೂಡಿಕೆಯಾಗಿದೆ. ಭಾರತ ತಂಡದ ಆಲ್ ರೌಂಡರ್ ಕೃಣಾಲ್ ಪಾಂಡ್ಯಗೆ ಕೊರೋನಾ ಪಾಸಿಟಿವ್ ಆಗಿದ್ದು ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ಧ 2ನೇ ಟಿ-20 ಪಂದ್ಯವನ್ನ ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಉಳಿದ ಆಟಗಾರರ ಕೋವಿಡ್ ರಿಪೋರ್ಟ್ ಬರುವವರೆಗೂ ಎರಡೂ ತಂಡಗಳನ್ನು ಪ್ರತ್ಯೇಕಕ್ಕೆ ಹೋಗುವಂತೆ ಮಾಡಿದೆ. ಹೀಗಾಗಿ ಭಾರತ ಮತ್ತು ಶ್ರೀಲಂಕಾ ತಂಡದ ಆಟಗಾರರು ಕ್ವಾರಂಟೈನ್ ಆಗಿದ್ದಾರೆ ಎನ್ನಲಾಗಿದೆ. ಉಳಿದ ಎರಡು ಟಿ.20 ಪಂದ್ಯಾವಳಿ ಬಗ್ಗೆ ಆಟಗಾರರಿಗೆ ಕೊರೋನಾ ಪಾಸಿಟಿವ್ ಪತ್ತೆ ಪರೀಕ್ಷೆಯ ನಂತರ ನಿರ್ಧಾರವಾಗಲಿದೆ. : - - -T20- 2nd –