ಯೋಧರ ಕಲ್ಯಾಣಕ್ಕೆ ಸರ್ಕಾರ ಬದ್ಧ- ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆ ಹುತಾತ್ಮ ಯೋಧರಿಗೆ ಸಿಎಂ ಬಿಎಸ್ ವೈ ನಮನ. ಬೆಂಗಳೂರು,ಜುಲೈ,26,2021(..):ಯೋಧರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. 22ನೇ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ ಸೇನಾಸ್ಮಾರಕಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ ಬಿಎಸ್ ವೈ ದೇಶ ಕಾಯುವ ಯೋಧರ ಹಿಂದೆ ಇಡೀ ದೇಶವೇ ಇದೆ. ಹುತಾತ್ಮ ಯೋಧರ ಕುಟುಂಬದ ಜತೆ ಎಂದಿಗೂ ಇರುತ್ತೇವೆ. ಯೋಧರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. : – –- - –