ಲದ್ದಿ ಎತ್ತೋರೆಲ್ಲಾ ಆನೆ, ಅಂಬಾರಿ ಬಗ್ಗೆ ನಿರ್ಣಯಿಸಲು ಸಾಧ್ಯವೇ? -ಆರ್.ರಘು ಕೌಟಿಲ್ಯ ತಿರುಗೇಟು. ಮೈಸೂರು,ಜುಲೈ,5,2021(..):ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್.ರಘು ಕೌಟಿಲ್ಯ ಟ್ವೀಟ್ ಮೂಲಕ ಸಿಎಂ ಯಡಿಯೂರಪ್ಪ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಲದ್ದಿ ಎತ್ತೋರೆಲ್ಲಾ ಆನೆ, ಅಂಬಾರಿ ಬಗ್ಗೆ ನಿರ್ಣಯಿಸಲು ಸಾಧ್ಯವೇ? ಜನ, ಅಂಬಾರಿ ಮೇಲೆ ರಾಜ ಕುಮಾರನನಲ್ಲದೇ ರಾಜ ದ್ರೋಹಿಯನ್ನು ಕೂರಿಸುತ್ತಾರೆಯೇ? ನೆಲೆ ಇಲ್ಲದ ರಾಜಕೀಯ ದಳ್ಳಾಳಿ ಮಾತಿಗೆ ಯಾವ ಕಿಮ್ಮತ್ತೂ ಇಲ್ಲ. ಜನರ ಹೃದಯದಿ ಕಮಲ ಅರಳಿಸಿ ‘ವಿಜಯ’ದ ನಗೆ ಬೀರುವ ಪಕ್ಷ ನಿಷ್ಟೆಯ ಭರವಸೆಯ ನೇತಾರನ ಬಗ್ಗೆ ಮಾತಾಡೋ ಯಾವ ಯೋಗ್ಯತೆಯೂ ಆತನಿಗಿಲ್ಲ ಎಂದು ಸಿಎಂ ಬಿಎಸ್ ವೈ ವಿರೋಧಿಗಳಿಗೆ ಆರ್. ರಘು ಕೌಟಿಲ್ಯ ತಿರುಗೇಟು ನೀಡಿದ್ದಾರೆ. : . – - -