ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದ್ದರೂ ಬಿಜೆಪಿ ತಟ್ಟೆಯಲ್ಲಿ ನೋಣ ಹುಡುಕುತ್ತೆ: ಬಿ.ಸಿ.ಪಾಟೀಲ್ ಬೆಂಗಳೂರು, ಜೂನ್ 19, 2021 (..): ವಿಶ್ವನಾಥ ಸಿಎಂ ಬಗ್ಗೆ ಹತಾಶೆಯಿಂದ ಆರೋಪ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ನೀರಾವರಿ ಇಲಾಖೆ ಹಾಗೂ ಸಿಎಂ ವಿರುದ್ಧ ವಿಶ್ವನಾಥ್‌ ಮಾಡಿರುವ ಆರೋಪಕ್ಕೆ ಸಿಎಂ ಸ್ಪಷ್ಢನೆ ನೀಡಿದ್ದಾರೆ ಕೊಪ್ಪಳದಲ್ಲಿ ಬಿಸಿ ಪಾಟೀಲ್ ತಿಳಿಸಿದ್ದಾರೆ. ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ ಬೇರೆಯವರ ತಟ್ಟೆಯಲ್ಲಿ ನೊಣದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು. ವಲಸಿಗ, ಮೂಲ ಶಾಸಕರ ಬಗೆಗಿನ ಹೇಳಿಕೆ ವಿಚಾರದಲ್ಲಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.