ಶಿಲ್ಪಿ ಅರುಣ್‌ ಯೋಗಿರಾಜ್‌ ಕಿರೀಟಕ್ಕೆ ಮತ್ತೊಂದು ಗರಿ : ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ. . . ಮೈಸೂರು, ಮೇ.30, 2024: (..) ಶಿಲ್ಪಿರತ್ನ ಅರುಣ್ ಯೋಗಿರಾಜ್ ಅವರಿಂದ ಮತ್ತೊಂದು ದಾಖಲೆ. ಐತಿಹ್ಯ ಜ್ಯೋತಿರ್ಲಿಂಗ ಅಮರನಾಥಗೆ ನಂದಿ. ಕಾಶ್ಮೀರದ ಅಮರನಾಥ ದೇಗುಲಕ್ಕೆ ನಂದಿ ನಿರ್ಮಾಣ. ಅಯೋಧ್ಯೆಯ ಶ್ರೀರಾಮ್ ಲಲ್ಲಾ‌ ಆಯ್ತು, ಕೇದರನಾಥದ ಶಂಕರಾಚಾರ್ಯರ ಪ್ರತಿಮೆ‌ ಆಯ್ತು, ಅರುಣ್ ಯೋಗಿರಾಜ್ ಕೈಯ್ಯಲ್ಲಿ ಮತ್ತೊಂದು ಕಲಾಕೃತಿ. ಅಮರನಾಥ ದೇಗುಲದ ಎದುರಿನ‌ ನಂದಿ ನಿರ್ಮಾಣ. ಮೈಸೂರು ಶೈಲಿಯ ನಂದಿ ನಿರ್ಮಾಣ. ನಂದಿಗೆ ಅಲಂಕಾರ,ಪ್ರಾಕಾರ, ಪ್ರಕೃತಿ‌ ಬಳಕೆ. ಅರುಣ್ ಯೋಗರಾಜ್ ಕೆತ್ತನೆಯ ನಂದಿ ವಿಗ್ರಹ, ಮೂರು ಅಡಿ ಎತ್ತರದ ಕೃಷ್ಣ ಶಿಲೆ ನಂದಿ. ಅಮರನಾಥ ಹಿಮದ ಉದ್ಭವ ಲಿಂಗದ ಮುಂದೆ ಪ್ರತಿಷ್ಠಾಪನೆಯಾಗಲಿರುವ ನಂದಿ ಅಮರನಾಥ ಹಿಂದೂಗಳ ಪವಿತ್ರ ಯಾತ್ರೆ, ಪ್ರತಿ ವರ್ಷ ಉದ್ವವ ಲಿಂಗ ದರ್ಶನಕ್ಕೆ ಆಗಮಿಸುವ ಕೋಟ್ಯಾಂತರ ಜನ ತೆರಳುತ್ತಾರೆ. ಶಿವಲಿಂಗದ ಮುಂಭಾಗ ಮೈಸೂರು ಕಲಾವಿದ ಅರುಣ್ ಯೋಗಿರಾಜ್ ಕೈ ಚಳಕದ ನಂದಿ ಪ್ರತಿಷ್ಠಾಪನೆ. ಅಮರನಾಥ್ ಬೋರ್ಡ್ ವತಿಯಿಂದ ನಂದಿ ವಿಗ್ರಹ ತಯಾರಿಗೆ ಮನವಿ. ಜೂನ್ ಅಂತ್ಯದಲ್ಲಿ ನಂದಿ ಪ್ರತಿಷ್ಠಾಪನೆ ಸಾಧ್ಯತೆ. ಮೈಸೂರಿನ ಎಚ್.ಡಿ.ಕೋಟೆ ತಾಲೂಕು ಅಯೋಧ್ಯೆ ನಿರ್ಮಾಣಕ್ಕೆ ಬಳಸಿರುವ ಕೃಷ್ಣಶಿಲೆಯಲ್ಲೆ ನಂದಿ ನಿರ್ಮಾಣ. ಮಂಜಿಗೆ ಕರಗದ ಕಲ್ಲು, ಎರಡೂವರೆ ತಿಂಗಳ ನಿರಂತರ ಶ್ರಮದಿಂದ ನಂದಿ ವಿಗ್ರಹದ ತಯಾರಿ ಕಾರ್ಯ ಪೂರ್ಣ. ಸುಂದರವಾಗಿ ಮೂಡಿಬಂದಿರುವ ನಂದಿ ವಿಗ್ರಹ ಮೈಸೂರಿನಿಂದ ದೂರದ ಕಾಶ್ಮೀರದ‌ ಅಮರನಾಥಗೆ ಕಳುಹಿಸಿಕೊಟ್ಟ ಅರುಣ್ ಯೋಗಿರಾಜ್. : , , , , . : . . . , . .. . --- , .