ಐಎಎಸ್ ವಾರ್! ಡಿಸಿ ರೋಹಿಣಿ ಲೆಕ್ಕ ಕೇಳಿದ್ದಕ್ಕೆ ಲೆಕ್ಕದ ಮೂಲಕವೇ ತಿರುಗೇಟು ಕೊಟ್ಟ ಶಿಲ್ಪಾ ನಾಗ್ *ಮೈಸೂರಿನಲ್ಲಿ ಮುಂದುವರಿದ ಡಿಸಿ ರೋಹಿಣಿ / ಪಾಲಿಕೆ ಆಯುಕ್ತೆ ಪತ್ರ ಸಮರ* ಸಿಎಸ್ಆರ್ ಯೋಜನೆಯ 12 ಕೋಟಿ ದೇಣಿಗೆ ಕುರಿತು ಲೆಕ್ಕ ಕೇಳಿದ್ದ ಡಿಸಿ ರೋಹಿಣಿ ಸಿಂಧೂರಿ ಮೈಸೂರು: ರೋಹಿಣಿ ಸಿಂಧೂರಿ ರೀತಿ ದಾಖಲಾತಿಗಳ ಮೂಲಕವೇ ಶಿಲ್ಪಾನಾಗ್ ತಿರುಗೇಟು ದೇಣಿಗೆ ರೂಪದಲ್ಲಿ ಪಾಲಿಕೆಗೆ ಬಂದಿರುವ ವಸ್ತುಗಳ ಹಾಗೂ ವೈದ್ಯಕೀಯ ಸಾಮಗ್ರಿಗಳ ಮಾಹಿತಿ ನೀಡಿದ ಶಿಲ್ಪಾನಾಗ್ ದಾನಿಗಳ ಹೆಸರು ಮತ್ತು ಪಡೆದ ವೈದ್ಯಕೀಯ ಸಾಮಗ್ರಿಗಳ ಮಾಹಿತಿ ಬಿಡುಗಡೆ. ಉದ್ದೇಶಪೂರ್ವಕ ಕಿರುಕುಳ, ಅನವಶ್ಯಕ ನೋಟಿಸ್ ಗಳನ್ನು ನೀಡಿದ್ದು ನಿಜವೆಂದು ಪುನರುಚ್ಛಾರ. ಶಿಲ್ಪಾನಾಗ್ ಅವರಿಗೆ ಕಿರುಕಳ ನೀಡಲ್ಲವೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದ ಡಿಸಿ ರೋಹಿಣಿ ಸಿಂಧೂರಿ. ಕೋವಿಡ್19 ಸಭೆಗಳಿಗೆ ನಿರಂತರವಾಗಿ ಹಾಜರಗುತ್ತಿದ್ದಾಗೆ ಶಿಲ್ಪಾನಾಗ್ ಸ್ಪಷ್ಟನೆ. ಕಾರ್ಯದ ಒತ್ತಡದಿಂದ ಆಯುಕ್ತರೆ ಎಲ್ಲಾ ಸಭೆಗಳಿಗೂ ಆಯುಕ್ತರು ಹಾಜರಾಗಲು ಸಾಧ್ಯವಾಗುವುದಿಲ್ಲ, ಪಾಲಿಕೆ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಸಭೆಗಳಲ್ಲಿ ಭಾಗಿಯಾಗಿ ಮಾಹಿತಿ ನೀಡುತ್ತಾರೆ. ಕೋವಿಡ್ ಮಿತ್ರ ಸ್ಥಾಪನೆ, ಟೆಲಿ ಮೆಡಿಸನ್ ಸೆಂಟರ್ ಸ್ಥಾಪನೆ, ಪಾಸಿಟಿವ್ ಇರುವ ಮನೆಗಳಿಗೆ ತೆರಳಿ ಮನೆ ಮನೆ ಸಮೀಕ್ಷೆ ನಡೆಸುವುದು ಈ ಎಲ್ಲಾ ಕಾರ್ಯಗಳು ಪಾಲಿಕೆ ವತಿಯಿಂದ ನಿರಂತರವಾಗಿ ನಡೆಯುತ್ತಿದೆ. ಡಿಸಿ ರೋಹಿಣಿ ಸಿಂಧೂರಿ ಪ್ರತಿ ಆರೋಪಗಳಿಗೆ ಮಾಧ್ಯಮ ಪ್ರಕಟಣೆಯ ಮೂಲಕ ಶಿಲ್ಪಾನಾಗ್ ತಿರುಗೇಟು