ಕೃಷಿ ವಿಚಕ್ಷಣಾ ದಳದ ಕಾರ್ಯಾಚರಣೆ: ಅನಧಿಕೃತ ದಾಸ್ತಾನು ಮಾಡಿದ್ದ 14 ಲಕ್ಷ ರೂ. ಬೆಲೆಬಾಳುವ ಬಿತ್ತನೆ ಬೀಜ ವಶ. ಕೊಪ್ಪಳ,ಜೂ,2,2021(..):ನಕಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟಗಾರರ ಮೇಲೆ ಕೃಷಿ ವಿಚಕ್ಷಣಾ ದಳ ದಾಳಿ ನಡೆಸಿ ಅನಧಿಕೃತ ದಾಸ್ತಾನು ಮಾಡಿದ್ದ 14 ಲಕ್ಷ ಬೆಲೆಬಾಳುವ ಬಿತ್ತನೆ ಬೀಜ ವಶಕ್ಕೆ ಪಡೆದಿದೆ. ಗಂಗಾವತಿ ತಾಲ್ಲೂಕಿನ ಗಂಗಾವತಿ ನಗರ ಮಲ್ಲಿಕಾರ್ಜುನ ಸೀಡ್ ಸೆಂಟರ್ ಮೇಲೆ ಕೃಷಿ ಜಾಗೃತ ದಳ ದಾಳಿ ನಡೆಸಿ, ಪರವಾನಿಗೆಯಿಲ್ಲದೇ ಅನಧಿಕೃತ ದಾಸ್ತಾನು 14 ಲಕ್ಷ ಬೆಲೆಬಾಳುವ ಬಿತ್ತನೆ ಬೀಜ ವಶಕ್ಕೆ ಪಡೆದಿದೆ. 58 ಕ್ವಿಂಟಾಲ್ ತೊಗರಿ, ಸಜ್ಜೆ , ಮೆಕ್ಕೆಜೋಳವನ್ನು ಕೃಷಿ ವಿಚಕ್ಷಣಾ ದಳ ವಶಕ್ಕೆ ಪಡೆದಿದೆ. : - – -14 - - -.