ಕೋವಿಡ್ 2ನೇ ಅಲೆ ಹಿನ್ನೆಲೆ: ಆಂಬ್ಯುಲೆನ್ಸ್ ಹಾಗೂ ಬೆಡ್ ಗಳನ್ನ ಕೊಡುಗೆಯಾಗಿ ನೀಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ… ಮೈಸೂರು,ಮೇ,15,2021(..):ಕೊರೋನಾ 2ನೇ ಅಲೆ ಹರಡುವಿಕೆ ಹೆಚ್ಚಾದ ಬೆನ್ನಲ್ಲೆ ರಾಜ್ಯದಲ್ಲಿ ಬೆಡ್ ಮತ್ತು ಆಕ್ಸಿಜನ್ ಕೊರತೆ ತಲೆದೂರಿದ್ದು ಹಲವು ಸೋಂಕಿತರು ಬೆಡ್ ಸಿಗದೆ ತನ್ನ ಪ್ರಾಣವನ್ನೆ ಕಳೆದುಕೊಂಡಿರುವ ಘಟನೆಗಳು ವರದಿಯಾಗಿದೆ. ಈ ಮಧ್ಯೆ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ಧರಾಮಯ್ಯ ಆ್ಯಂಬುಲೆನ್ಸ್ ಮತ್ತು ಬೆಡ್ ಗಳನ್ನ ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ. ಹೌದು ಶಾಸಕ ಯತೀಂದ್ರ ಸಿದ್ದರಾಮಯ್ಯ ತನ್ನ ಸ್ವಂತ ಹಣದಲ್ಲಿ ಎರಡು ಆಂಬ್ಯುಲೆನ್ಸ್ ಹಾಗೂ ಐವತ್ತಕ್ಕು ಹೆಚ್ಚು ಬೆಡ್ ಗಳನ್ನ ನೀಡಿದ್ದಾರೆ. ತಿ ನರಸೀಪುರ ಹಾಗೂ ನಂಜನಗೂಡು ತಾಲೂಕು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಕೂಡ್ಲೂರು ಕೋವಿಡ್ ಕೇರ್ ಸೆಂಟರ್ ಗೆ ಒಂದು ಆಂಬ್ಯುಲೆನ್ಸ್. ನಂಜನಗೂಡು ಆಸ್ಪತ್ರೆಗೆ. 1 ಆಂಬ್ಯುಲೆನ್ಸ್ ನೀಡಿದ್ದು ತಹಶೀಲ್ದಾರ್ ಗೆ ಹಸ್ತಾಂತರ ಮಾಡಿದ್ದಾರೆ. : -2nd - - - - -