ಹೆಲಿಟೂರಿಸಂ ನಿರ್ಮಾಣಕ್ಕೆ ಮರ ಕಡಿಯುವ ವಿಚಾರ: ಸಾರ್ವಜನಿಕ ಅಹವಾಲು ಸಭೆ‌ ಮುಂದೂಡಿಕೆ… ಮೈಸೂರು,ಏಪ್ರಿಲ್,21,2021(..):ಹೆಲಿಟೂರಿಸಂ ನಿರ್ಮಾಣ ಮಾಡಲು ಉದ್ದೇಶಿತ ಪ್ರದೇಶದಲ್ಲಿ ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸಾರ್ವಜನಿಕ ಅಹವಾಲು ಸಭೆಯನ್ನ ಅರಣ್ಯ ಇಲಾಖೆ ಮುಂದೂಡಿದೆ. ಮೈಸೂರಿನಲ್ಲಿ ಹೆಲಿಟೂರಿಸಂ ನಿರ್ಮಾಣಕ್ಕೆ ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 23 ರಂದು ಸಾರ್ವಜನಿಕ ಅಹವಾಲು ಸಭೆ‌ ನಡೆಯಬೇಕಿತ್ತು. ಆದರೆ ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹೀಗಾಗಿ ಕೋವಿಡ್ ಮಾರ್ಗಸೂಚಿ ಅನ್ವಯ ಹಿನ್ನೆಲೆ ಅನಿರ್ಧಿಷ್ಟಾಧಿಗೆ ಸಾರ್ವಜನಿಕ ಅಹವಾಲು ಸಭೆಯನ್ನ ಅರಣ್ಯ ಇಲಾಖೆ ಮುಂದೂಡಿದೆ. : - – -- – -