ಕೊರೊನಾ ಸೋಂಕಿತರ ಕೈ ಗೆ ಸೀಲ್ ಹಾಕಲು ತೀರ್ಮಾನ : ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬೆಂಗಳೂರು,ಏಪ್ರಿಲ್,17,2021(..) :ಕೊರೋನ ಸೋಂಕು ದೃಢಪಟ್ಟವರ ಕೈಗೆ ಮೊದಲಿನಂತೆ ಸೀಲ್ ಹಾಕಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ. ಆ ಮೂಲಕ ಸೋಂಕಿತರಿಂದ ಹರಡುವಿಕೆಯನ್ನು ತಡೆಯುವುದು ನಮ್ಮ ಉದ್ದೇಶ. ನಿನ್ನೆ ಪಾಲಿಕೆಯ 8 ವಲಯಗಳ ಮಟ್ಟದಲ್ಲಿ ಕೋವಿಡ್‌ ಸೋಂಕು ನಿಯಂತ್ರಣದ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. : ---------