ಮೈಸೂರಿಗೆ ಹೆಲಿಟೂರಿಸಂ ಮತ್ತೊಂದು ಗರಿ. ಆದರೆ, ಧಕ್ಕೆ ತರದ ಹಾಗೆ ನಿರ್ಮಿಸುವುದು ಸೂಕ್ತ : ಪುಷ್ಪಾ ಅಮರ್ ನಾಥ್ ಮೈಸೂರು,ಏಪ್ರಿಲ್,15,2021(..) :ಹೆಲಿಟೂರಿಸಂ ಮೈಸೂರು ನಗರದ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಪರಿಸರ ಸ್ನೇಹಿ ಮೈಸೂರು ನಗರಕ್ಕೆ ಧಕ್ಕೆ ತರದ ಹಾಗೆ ನಿರ್ಮಿಸುವುದು ಸೂಕ್ತ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಲಲಿತ್ ಮಹಲ್ ಬಳಿ ನಿರ್ಮಾಣ ಮಾಡುವುದನ್ನು ಕೈ ಬಿಟ್ಟು, ಮೈಸೂರಿನ ನಗರದ ಹೊರ ವಲಯದಲ್ಲಿ ನಿರ್ಮಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ. : -- ------