ಕೊರೋನಾ ಹಿನ್ನೆಲೆ: ಉಚ್ಚೆಂಗೆಮ್ಮ ಜಾತ್ರೆ ರದ್ದು… ವಿಜಯನಗರ,ಏಪ್ರಿಲ್,11,2021(..):ರಾಜ್ಯದಲ್ಲಿ ಕೊರೋನಾ ಮಹಾಮಾರಿ 2ನೇ ಅಲೆ ವೇಗವಾಗಿ ಹರಡುತ್ತಿದ್ದು ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ರಾಜ್ಯದ 8 ನಗರಗಳಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ ಕೊರೋನಾ ಹಿನ್ನೆಲೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚೆಂಗೆಮ್ಮ ದೇವಾಲಯದ ಉಚ್ಚೆಂಗೆಮ್ಮ ಜಾತ್ರೆಯನ್ನ ರದ್ದು ಮಾಡಲಾಗಿದೆ. ಏಪ್ರಿಲ್ 12 ರಿಂದ 15ರವರೆಗೆ ಜಾರಿ ನಡೆಯಬೇಕಾಗಿತ್ತು. ಆದರೆ ಕೊರೋನಾ ಹಿನ್ನೆಲೆ ಜಾತ್ರೆ ರದ್ಧು ಮಾಡಲಾಗಿದ್ದು ಪೊಲೀಸರು ಭಕ್ತರನ್ನ ಹಿಂದಕ್ಕೆ ಕಳುಹಿಸುತ್ತಿದ್ದಾರೆ. : --- -