ರಮೇಶ್ ಜಾರಕಿಹೊಳಿಗೆ ಕೊರೋನಾ: ಪ್ರಚಾರಕ್ಕೆ ಬರೋದು ಡೌಟ್- ಸಚಿವ ಭೈರತಿ ಬಸವರಾಜ್… ಬೆಳಗಾವಿ,ಏಪ್ರಿಲ್,5,2021(..):ರಮೇಶ್ ಜಾರಕಿಹೊಳಿ ಕೊರೋನಾ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಅವರು ಪ್ರಚಾರಕ್ಕೆ ಬರೋದು ಡೌಟ್ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದ್ದಾರೆ. ಬೆಳಗಾವಿ ಬೈ ಎಲೆಕ್ಷನ್ ಹಿನ್ನೆಲೆ ರಮೇಶ್ ಜಾರಕಿಹೊಳಿ ಪ್ರಚಾರ ಕುರಿತು ಮಾತನಾಡಿದ ಸಚಿವ ಭೈರತಿ ಬಸವರಾಜು, ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರೋದು ಡೌಟ್. ‘ಪ್ರಚಾರಕ್ಕೆ ಕರೆಯಲು ನಾನು ಅವರಿಗೆ ಫೋನ್ ಮಾಡಿದ್ದೆ. ಆದರೆ ಫೋನ್ ಮಾಡಿದ್ದಾಗ ಕೊರೋನಾ ಇದೆ ಎಂದಿದ್ದಾರೆ ಎಂದರು. ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ. ಚೇತರಿಕೆಯಾದ ನಂತರ ಪ್ರಚಾರಕ್ಕೆ ಬರುತ್ತಾರೆ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದ್ದಾರೆ. : - - - -- .