ಸಿಎಂ ವಿರುದ್ಧ ದೂರು ನೀಡುವುದು ಲಾಯಲ್ ಆಗುತ್ತಾ? ಕೆ.ಎಸ್.ಈಶ್ವರಪ್ಪಗೆ ಡಿಕೆಶಿ ಪ್ರಶ್ನೆ ಬೆಂಗಳೂರು,ಏಪ್ರಿಲ್,02,2021(..) :ಕೆ.ಎಸ್.ಈಶ್ವರಪ್ಪ ಹೇಳಿದ್ದು, ಕೇಳುವುದಕ್ಕೆ ಯಾರೂ ಶಾಲೆಗೆ ಹೋಗುತ್ತಿಲ್ಲ. ಸಿಎಂ ವಿರುದ್ಧ ದೂರು ನೀಡುವುದು ಲಾಯಲ್ ಆಗುತ್ತ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಸಿಎಂ ಬಿ.ಎಸ್.ವೈ ರಾಜೀನಾಮೆ ನೀಡಬೇಕು. ಕೊರೊನಾ ಮಾರ್ಗಸೂಚಿ ಸರ್ಕಾರಕ್ಕೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳುವುದಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕು. ಪ್ರತಿಭಟನೆ ನಿಲ್ಲಿಸಲು ಗೈಡ್ ಲೈನ್ಸ್ ಮಾಡುವುದಲ್ಲ ಎಂದು ಕಿಡಿಕಾರಿದ್ದಾರೆ. : ----?-..--