ಕಾಂಗ್ರೆಸ್ ನವರ ಚೀಪ್ ನಡವಳಿಕೆ ಬಗ್ಗೆ ಮಾತನಾಡುವುದಿಲ್ಲ : ಸಚಿವ ಶ್ರೀರಾಮುಲು ಬೆಂಗಳೂರು,ಏಪ್ರಿಲ್,02,2021(..): ಜನರು ಭಾವನಾತ್ಮಕವಾಗಿ ದೇಣಿಗೆ ನೀಡಿದರೆ ನೀಡಲಿ. ಕಾಂಗ್ರೆಸ್ ನವರ ಚೀಪ್ ನಡವಳಿಕೆ ಬಗ್ಗೆ ಮಾತನಾಡುವುದಿಲ್ಲ. 5ಎ ಉಪ ಕಾಲುವೆ ವಿಚಾರದಿಂದ ನಮಗೆ ಹಿನ್ನೆಡೆಯಾಗುವುದಿಲ್ಲ. ರೈತ ಮನವೊಲಿಸುವ ಕೆಲಸ ಮಾಡುವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ. ಸಿಎಂ ಬಿ.ಎಸ್.ವೈ ವಿರುದ್ಧ ರಾಜ್ಯಪಾಲರಿಗೆ ಸಚಿವ ಕೆ.ಎಸ್.ಈಶ್ವರಪ್ಪ ಪತ್ರ ಕುರಿತು ಮಾತನಾಡಿ, ದೂರು ನೀಡಿದ ತಕ್ಷಣ ವಜಾ ಮಾಡಬೇಕಿಲ್ಲ. ಸಿದ್ದರಾಮಯ್ಯ ಕಾನೂನಿನಲ್ಲಿ ಏನಾದರು ಈ ರೀತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಈಶ್ವರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ಒಂದೇ ಶಾಲೆಯಲ್ಲಿ ಓದಿದ ದೋಸ್ತ್ ಗಳು. ಕೆಲ ವಿಚಾರ ಕುರಿತು ಪತ್ರ ಬರೆದಿದ್ದಾರೆ. ಚುನಾವಣೆ ಮುಗಿದ ಬಳಿಕ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲಾಗುವುದು ಎಂದಿದ್ದಾರೆ. : ---’ ---