ಸಿಡಿ ಸಂತ್ರಸ್ತೆ ಯುವತಿ ಇಂದು ಕೋರ್ಟ್ ಗೆ ಹಾಜರಾಗುವುದಿಲ್ಲ- ವಕೀಲ ಜಗದೀಶ್ ಕುಮಾರ್ ಹೇಳಿಕೆ… ಬೆಂಗಳೂರು,ಮಾರ್ಚ್,29,2021(..):ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದು ಕೋರ್ಟ್ ಮುಂದೆ ಹಾಜರಾಗುವುದಿಲ್ಲ ಎಂದು ಯುವತಿ ಪರ ವಕೀಲ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ವಕೀಲ ಜಗದೀಶ್ ಕುಮಾರ್, ಕೋರ್ಟ್ ಆದೇಶ ನೋಡದೆ ಏನು ಹೇಳಲು ಬರಲ್ಲ. ಕೋರ್ಟ್ ಮುಂದೆ ಇಂದು ಯುವತಿ ಹಾಜರಾಗುವುದಿಲ್ಲ. ಪ್ರಕರಣದ ಆರೋಪಿ ಪವರ್ ಫುಲ್ ಆಗಿರುವುದರಿಂದ ನಮ್ಮ ಚಲನವಲನವೆಲ್ಲವನ್ನೂ ಗಮನಿಸುತ್ತಿದ್ದಾರೆ. ಹೀಗಾಗಿ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ. ಆ ಯುವತಿಯನ್ನ ಕೋರ್ಟ್ ಗೆ ಹಾಜರುಪಡಿಸುತ್ತೇವೆ. ಆದರೆ ಇಂದು ಹಾಜರುಪಡಿಸುವುದಿಲ್ಲ ಎಂದರು. : ---- - - .