ಉಪಚುನಾವಣೆಗೆ ಸಿಡಿ ಪ್ರಕರಣ ಎಫೆಕ್ಟ್ ಆಗಲ್ಲ- ಸಚಿವ ಜಗದೀಶ್ ಶೆಟ್ಟರ್… ಬೆಂಗಳೂರು,ಮಾರ್ಚ್,27,2021(..):ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ ಬಾರಿ ಸದ್ಧು ಮಾಡುತ್ತಿದ್ದು, ಈ ನಡುವೆ ರಾಜ್ಯ ಉಪಚುನಾವಣೆಗೆ ಸಿಡಿ ಪ್ರಕರಣ ಎಫೆಕ್ಟ್ ಆಗಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಸಿಡಿ ಪ್ರಕರಣ ಸತ್ಯಾಂಶ ಹೊರಬರಲು ಎಸ್ ಐಟಿ ರಚನೆ ಮಾಡಿದ್ದೇವೆ. ಉಪಚುನಾವಣೆಗೆ ಸಿಡಿ ಪ್ರಕರಣ ಎಫೆಕ್ಟ್ ಆಗಲ್ಲ. ಮತದಾರರು ಬೇರೆ ಬೇರೆ ಸಂಶಯದಿಂದ ನೋಡುತ್ತಿದ್ದಾರೆ. ಕ್ರಿಯೇಟ್, ಷಡ್ಯಂತ್ರ ಎಂಬ ಆಲೋಚನೆ ಮತದಾರರಲ್ಲಿ ಬಂದಿದೆ ಎಂದರು. ಹಾಗೆಯೇ ಉಪಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಪ್ರಚಾರಕ್ಕೆ ಬರುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು. : - – - -- -