ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಬಡಕಾರ್ಮಿಕನಿಗೆ ವಂಚನೆ: ಐವರ ಬಂಧನ… ಮೈಸೂರು,ಮಾರ್ಚ್,18,2021(..):ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಬಡ ಕಾರ್ಮಿಕನಿಗೆ ವಂಚಿಸಿದ್ಧ ಐವರು ಆರೋಪಿಗಳನ್ನ ನಂಜನಗೂಡು ಠಾಣಾ ಪೊಲೀಸರು ಬಂಧಿಸಿದ್ದಾರೆ. ನಟೇಶ್, ಅಮೀರ್, ಮಹೇಶ್, ಶ್ರೀನಿವಾಸ್, ಸತೀಶ್ ಬಂಧಿತ ಆರೋಪಿಗಳು ಬಂಧಿತರಿಂದ ಪೊಲೀಸರು 25 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ರೈಸ್ ಪುಲ್ಲಿಂಗ್ ಹೆಸರಿನಲ್ಲಿ ಬಡ ಕಾರ್ಮಿಕನ ಮನೆ ಮತ್ತು ಒಡವೆಗಳನ್ನ ಮಾರಿಸಿದ್ದರು ಎನ್ನಲಾಗಿದೆ. ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು ಈ ಬಗ್ಗೆ ಮೈಸೂರು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ. : – – – - – -