ನಾನು ಸಿಎಂ ಬಿಎಸ್ ವೈ, ಬಿವೈ ವಿಜಯೇಂದ್ರರ ಏಜೆಂಟ್ ಆಗಿಲ್ಲ- ಬಸನಗೌಡ ಪಾಟೀಲ್ ಯತ್ನಾಳ್… ಬೆಂಗಳೂರು,ಮಾರ್ಚ್,15,2021(..):ನಾನು ಸಿಎಂ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರರ ಏಜೇಂಟ್ ಆಗಿಲ್ಲ. ನಾನು ಪ್ರಧಾನಿ ಮೋದಿಗೆ ಮಾತ್ರ ಬೆಂಬಲಿಗೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಭ್ರಷ್ಟಾಚಾರಶಾಹಿ ಕುಟುಂಬದ ವಿರುದ್ದ ನನ್ನ ಹೋರಾಟ ಮುಂದುವರೆಯಲಿದೆ. ಮೀಸಲಾತಿ ಹೋರಾಟಕ್ಕೆ ಆರು ತಿಂಗಳ ಕಾಲ ಬ್ರೇಕ್ ಹಾಕಲಾಗಿದೆ. ಈಗ ಭ್ರಷ್ಟಾಚಾರದ ವಿರುದ್ಧ ಮಾತ್ರ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. : - – - - -- .