“ಕಾಂಗ್ರೆಸ್‌ ಪ್ರೇರಿತ ಪ್ರತಿಭಟನಾಕಾರರು ಅಷ್ಟೇ ಅಲ್ಲಿ ಉಳಿದಿದ್ದಾರೆ” : ರಾಜ್ಯ ಬಿಜೆಪಿ ಟೀಕೆ ಬೆಂಗಳೂರು,ಮಾರ್ಚ್,12,2021(..) :ದೇಶದ ರೈತರು ಕೃಷಿಯಲ್ಲಿ ಮಗ್ನರಾಗಿದ್ದಾರೆ, ಕಾಂಗ್ರೆಸ್‌ ಪ್ರೇರಿತ ಪ್ರತಿಭಟನಾಕಾರರು ಅಷ್ಟೇ ಅಲ್ಲಿ ಉಳಿದಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.ಸರ್ವಾಧಿಕಾರಿ ಧೋರಣೆ ಹಿನ್ನಲೆಯ ಕಾಂಗ್ರೆಸ್‌ ಪಕ್ಷಕ್ಕೆ, ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಿ ಕಾಣುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.ಅಧಿಕಾರಕ್ಕಾಗಿ ತುರ್ತುಪರಿಸ್ಥಿತಿಯಂತಹ ಕರಾಳ ಚರಿತ್ರೆಗೆ ನಾಂದಿ ಹಾಡಿದ್ದು ಯಾರು? ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಟಾಂಗ್ ನೀಡಿದೆ. : ------