ಸಿಡಿ ಪ್ರಕರಣ : ಎಸ್.ಐಟಿ ತನಿಖೆಯಿಂದ ಏನು ಪ್ರಯೋಜನ ಇಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ… ಮೈಸೂರು,ಮಾರ್ಚ್,11,2021(..): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣವನ್ನು ಎಸ್ ಐಟಿ ತನಿಖೆ ವಹಿಸಿರುವ ವಿಚಾರ. ಎಸ್ ಐಟಿ ತನಿಖೆಯಿಂದ ಯಾವುದೇ ಪ್ರಯೋಜನ ಇಲ್ಲ. ಎಸ್ ಐಟಿ ತನಿಖೆಯಿಂದ ಯಾರಿಗೂ ಶಿಕ್ಷೆ ಆಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಎಸ್ ಐಟಿ ತನಿಖೆಯಿಂದ ಯಾರಿಗೂ ಶಿಕ್ಷೆಯೂ ಆಗಲ್ಲ. ಇದು ತಿಪ್ಪೆ ಸಾರಿಸುವ ಕೆಲಸ. ಎಸ್ ಐಟಿ ತನಿಖೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಯಾರ ವಿರುದ್ಧ ತನಿಖೆ ಮಾಡುತ್ತಾರೆ? ಏನಂತ ತನಿಖೆ ಮಾಡುತ್ತಾರೆ? ಯಾವ ವಿಚಾರಗಳ ಆಧಾರದ ಮೇಲೆ ತನಿಖೆಗೆ ಆದೇಶ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ಅವರದ್ದು ಸೇರಿದಂತೆ ಸಿಡಿ ಇದೆಯಂತಾ..? ಹಲವರ ಸಿಡಿ ಇದೆ ಎಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ಅವರದ್ದು ಸೇರಿದಂತೆ ಸಿಡಿ ಇದೆಯಂತಾ ಎಂದು ಟಾಂಗ್ ನೀಡಿದರು. ನಾನು ಟಿಎ ಡಿಎ ಪಡೆಯಲು ಸದನಕ್ಕೆ ಹಾಜರಾಗ್ಲಾ..? ಬಜೆಟ್ ಅಧಿವೇಶನಕ್ಕೆ ಗೈರಾಗಿರುವುದಕ್ಕೆ ಸ್ಪಷ್ಟನೆ ನೀಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ಟಿಎ ಡಿಎ ಪಡೆಯಲು ಸದನಕ್ಕೆ ಹಾಜರಾಗಲಾ..? ಸದನದಲ್ಲಿ ಭಾಗಿಯಾಗುವುದರಿಂದ ಏನು ಪ್ರಯೋಜನ ಇಲ್ಲ .ಸದನದಲ್ಲಿ ಉತ್ತಮ ಚರ್ಚೆ ನಡೆಯುತ್ತಿಲ್ಲ. ಅಧಿಕೃತ ವಿಪಕ್ಷದವರು ಸಮಯ ಹಾಳು ಮಾಡುತ್ತಿದ್ದಾರೆ. ಇಲ್ಲಾ ಶರ್ಟ್ ಬಿಚ್ಚಿ ನಿಂತುಕೊಳ್ತಾರೆ ಎಂದು ಕಿಡಿಕಾರಿದರು. …. : – , . 11, 2021 (..): “ ’ , ,” .. . , , , . ? ? ?,” . .. , “ -?. . . ,” .: .. / : - ---- -