“ಭಾವಗೀತೆಗಳ ಲೋಕದ ಭಾವುಕ ಕವಿ” : ಎನ್.ಎಸ್.ಲಕ್ಷ್ಮಿನಾರಾಯಣ ಭಟ್ ಅವರ ನಿಧನಕ್ಕೆ ಎಚ್.ಡಿ.ಕೆ ಸಂತಾಪ ಬೆಂಗಳೂರು,ಮಾರ್ಚ್,06,2021(..) :ನಾಡಿನ‌ ಖ್ಯಾತ ಕವಿ ಎನ್.ಎಸ್ ಲಕ್ಷ್ಮಿನಾರಾಯಣ ಭಟ್ ಅವರು ವಿಧಿವಶರಾದದ್ದು ದುಃಖದ ಸಂಗತಿ. ಭಾವಗೀತೆಗಳ ಲೋಕದ ಭಾವುಕ ಕವಿ ಇನ್ನಿಲ್ಲ ಎಂಬುದು ನಾಡಿನ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಭಾವಸಾರವನ್ನೆ ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಮಹತ್ವ ಕವಿ, ವಿಮರ್ಶಕ, ಶಿಶುಗೀತೆಕಾರರೂ, ಅನುವಾದಕರೂ ಆಗಿದ್ದ ಪ್ರೀತಿಯ ‘ಎನ್ನೆಸ್ಎಲ್’ ಅವರು ಜಗದ ತಾಯಿಯ ಮಾಯೆಯ ಲೀಲೆಯೊಳಗೆ ಕರಗಿಹೋದರು ಎಂದು ತಿಳಿಸಿದ್ದಾರೆ. : ----.. --..-