ಸಹಾಯಕ ಕಾರ್ಮಿಕ ಆಯುಕ್ತ ಎ.ಸಿ. ತಮ್ಮಣ್ಣ ವರ್ಗಾವಣೆ… ಮೈಸೂರು,ಮಾರ್ಚ್,5,2021(..):ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾಗಿದ್ದ ಎ.ಸಿ. ತಮ್ಮಣ್ಣ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಲಾಕ್‌ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ವಾಸ್ತವ್ಯಕ್ಕೆ ಅಗತ್ಯ ಸೌಕರ್ಯ ಕಲ್ಪಿಸಲು ಹಾಗೂ ಈ ಕಾರ್ಮಿಕರನ್ನು ವಾಪಸ್ ಅವರವರ ಊರಿಗೆ ಕಳುಹಿಸಲು ಇವರು ಶ್ರಮಿಸಿದ್ದರು. ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರ ಹುದ್ದೆಯ ಪ್ರಭಾರವನ್ನು ಕಾರ್ಮಿಕ ಅಧಿಕಾರಿ ರಾಜೇಶ್ ಜಾಧವ್ ಅವರಿಗೆ ನೀಡಲಾಗಿದೆ. : -. -