ಜೆಡಿಎಸ್ ಸೇರ್ಪಡೆ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಇಬ್ರಾಹಿಂ… ಬೆಂಗಳೂರು,ಮಾರ್ಚ್,5,2021(..):ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಜೆಡಿಎಸ್ ಸೇರ್ಪಡೆಯಾಗುತ್ತಾರೆಂದು ಸುದ್ದಿ ಹಬ್ಬಿರುವ ಹಿನ್ನೆಲೆ ಈ ಬಗ್ಗೆ ಸ್ವತಃ ಸಿಎಂ ಇಬ್ರಾಹಿಂ ಅವರೇ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಇಬ್ರಾಹಿಂ, ನಾನು ಜೆಡಿಎಸ್ ಸೇರುತ್ತೇನೆ ಎಂದು ಎಲ್ಲಿ ಹೇಳಿದ್ದೆ. ಸಿದ್ಧರಾಮಯ್ಯ ಜತೆ ನನಗೆ ಎಂದೂ ಬೇಸರವಿಲ್ಲ. ಹೆಚ್.ಡಿ ದೇವೇಗೌಡರು, ಹೆಚ್.ಡಿ ಕುಮಾರಸ್ವಾಮಿಯ ಜತೆಯೂ ಚೆನ್ನಾಗಿ ಇದ್ದೇನೆ. ಬಿಜೆಪಿ ನಾಯಕರ ಜತೆಯೂ ಚೆನ್ನಾಗಿ ಇದ್ದೇನೆ. ಎಲ್.ಕೆ ಅಡ್ವಾಣಿ ಅವರ ಮನೆಯಲ್ಲೂ ಉಪಹಾರ ಸೇವಿಸಿದ್ದೇನೆ. ಅದರ್ಥ ಕಾಂಗ್ರೆಸ್ ಬಿಡುತ್ತೇನೆ ಎಂದಲ್ಲ ಎಂದು ತಿಳಿಸಿದರು. ರಾಜಕೀಯವಾಗಿ ನನ್ನ ನಿರ್ಧಾರ ದೆಹಲಿಗೆ ಹೋಗಿ ಬಂದ ಬಳಿಕ ನಿರ್ಧಾರವಾಗುತ್ತದೆ. ಇಲ್ಲಿ ಯಾರು ಯಾರಿಗೂ ನನಗೆಕೊಡಬೇಕಿಲ್ಲ ಎಂದರು. … .. , .05, 2021 (..): .. . . “ ’ . .. .. . .. . ’ . ,” . : - - - - : - - - - .