ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ- ಕೃಷಿ ಸಚಿವ ಬಿಸಿ ಪಾಟೀಲ್… ಬೆಂಗಳೂರು, ಮಾರ್ಚ್,3,2021(..):ರಮೇಶ್ ಜಾರಕಿಹೊಳಿ ಮೇಲೆ ಆಪಾದನೆ ಬಂದಿರಬಹುದು. ಆಪಾದನೆ ಬಂದ ತಕ್ಷಣ ಅವರು ಆರೋಪಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ ತಮ್ಮ ಮೇಲೆ ಬಂದ ಆಪಾದನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಪ್ರತ್ಯಕ್ಷವಾಗಿ ಕಂಡರೂ ಅದನ್ನು ಪ್ರಮಾಣಿಸಿ ನೋಡಬೇಕು. ಪ್ರಕರಣದ ಬಗ್ಗೆ ತನಿಖೆ ಆಗಲಿ ಎಂದು ಅವರೇ ಹೇಳಿದ್ದಾರೆ. ಸತ್ಯಾಸತ್ಯತೆ ಹೊರಗೆ ಬಂದ ಬಳಿಕ ಕಾನೂನು ಪ್ರಕ್ರಿಯೆ ನಡೆಯಲಿದೆ. ಈಗ ಅವರ ಮೇಲೆ ಬಂದಿರುವುದು ಆಪಾದನೆ ಆಗುತ್ತದಷ್ಟೇ ಎಂದರು. : – – - - - .