ಟೊಯೋಟಾ-ಕಿರ್ಲೊಸ್ಕರ್ ಕಂಪನಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಸುಖಾಂತ್ಯ-ಡಿಸಿಎಂ ಅಶ್ವಥ್ ನಾರಾಯಣ್… ಬೆಂಗಳೂರು,ಮಾರ್ಚ್,3,2021(..):ಬಿಡದಿಯ ಟೊಯೋಟಾ-ಕಿರ್ಲೊಸ್ಕರ್ ಕಂಪನಿ ಮತ್ತು ಕಾರ್ಮಿಕರ ನಡುವೆ ಇದ್ಧ ಬಿಕ್ಕಟ್ಟು ಸುಖಾಂತ್ಯವಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಬಿಡದಿಯ ಟೊಯೋಟಾ-ಕಿರ್ಲೊಸ್ಕರ್ ಕಂಪನಿಯ ತಯಾರಿಕಾ ಘಟಕದಲ್ಲಿ ನಡೆಯುತ್ತಿದ್ದ ಕಾರ್ಮಿಕರ ಹಾಗೂ ಕಂಪನಿಯ ಮಧ್ಯೆ ಇದ್ದ ಬಿಕ್ಕಟ್ಟು ಇತ್ಯರ್ಥವಾಗಿ ಸುಖಾಂತ್ಯ ಕಂಡಿದೆ. ಸಮಸ್ಯೆಗಳನ್ನು ಬಗೆಹರಿಸಿ ಮತ್ತೆ ಕಾರ್ಯನಿರ್ವಹಿಸಲು ಬರುತ್ತಿರುವ ಕಾರ್ಮಿಕರಿಗೆ, ಅವರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದ ಕಂಪನಿಯ ಪ್ರತಿನಿಧಿಗಳಿಗೆ ಅಭಿನಂದನೆಗಳು..! ಎಂದು ಟ್ವೀಟ್ ಮಾಡಿದ್ದಾರೆ. : - – - - – -- .