ಮೈಸೂರಿನಲ್ಲಿ ಶೀಘ್ರದಲ್ಲೇ ‘ಹೆಲಿ ಟೂರಿಸಂ’ : ಸಚಿವ ಸಿ.ಪಿ ಯೋಗೇಶ್ವರ್… ಮೈಸೂರು,ಮಾರ್ಚ್,2,2021(..):ಮೈಸೂರಿನಲ್ಲಿ ಶೀಘ್ರದಲ್ಲೇ ಹೆಲಿ ಟೂರಿಸಂ ಆರಂಭಿಸುತ್ತೇವೆ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ಮೈಸೂರು ಸೇರಿ ರಾಜ್ಯದ ನಾಲ್ಕು ಪ್ರವಾಸಿ ತಾಣಗಳಲ್ಲಿ ಹೆಲಿ ಟೂರಿಸಂ ಆರಂಭಿಸಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಮೈಸೂರಿನ ಹೋಟೆಲ್‌ ಗಳನ್ನು ವಾಣಿಜ್ಯ ವ್ಯಾಪ್ತಿಯಿಂದ ಕೈಗಾರಿಕಾ ವ್ಯಾಪ್ತಿಗೆ ತರಲಾಗುವುದು. ಈ‌ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ನುಡಿದರು. ಮೈಸೂರಿಗೆ ಪ್ರವಾಸಿಗರ ಸಂಖ್ಯೆ ಕಡಿಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಪಿ ಯೋಗೇಶ್ವರ್, ಇದಕ್ಕೆ ಕಾರಣ ಅಂತರರಾಜ್ಯ ರಸ್ತೆ ತೆರಿಗೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದ ರಸ್ತೆ ತೆರಿಗೆ ಜಾಸ್ತಿ ಇದೆ. ಈ ಹಿನ್ನಲೆಯಲ್ಲಿ ಒಂದೇ ದೇಶ ಒಂದು ತೆರಿಗೆಯಂತೆ ಒಂದೇ ತೆರಿಗೆ ಪದ್ದತಿ. ಕೇರಳ‌ ಮಾದರಿಯಲ್ಲಿ ರಸ್ತೆ ತೆರಿಗೆ ಜಾರಿಗೆ ಚಿಂತ‌ನೆ ಮಾಡಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ಮೈಸೂರು ಪ್ರವಾಸೋದ್ಯಮಕ್ಕೆ ವಿಶೇಷ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು. ಕೆಆರ್ ಎಸ್ ನಲ್ಲಿ ಡಿಸ್ನಿ‌ಲ್ಯಾಂಡ್ ಸ್ಥಾಪನೆ: ಸಾಧಕ ಭಾದಕಗಳ‌ ಬಗ್ಗೆ ಚರ್ಚೆ… ಕೆಆರ್ ಎಸ್ ನಲ್ಲಿ ಡಿಸ್ನಿ‌ಲ್ಯಾಂಡ್ ಸ್ಥಾಪನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸಿ.ಪಿ ಯೋಗೇಶ್ವರ್, ಈ ಯೋಜನೆ ಇನ್ನು ಜೀವಂತವಾಗಿದೆ. ಅದರ ಸಾಧಕ ಭಾದಕಗಳ‌ ಬಗ್ಗೆ ಚರ್ಚೆ ಮಾಡಲಾಗುವುದು. ಸಮ್ಮಿಶ್ರ ಸರ್ಕಾರದ ಕಾಲದ ಯೋಜನೆಯೆಂದು ಕೈ ಬಿಡುವ ವಿಚಾರ ಇಲ್ಲ. ನೀರಾವರಿ ಸಚಿವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು. : – –- - .