ಹಳೇ ಮೈಸೂರಿನಲ್ಲಿ ಆದಷ್ಟು ರಸ್ತೆಗಳು ನಮ್ಮಲ್ಲಿ ಆಗಿಲ್ಲ : ಸಚಿವ ಬಿ.ಸಿ.ಪಾಟೀಲ್ ಬೆಂಗಳೂರು,ಫೆಬ್ರವರಿ,28,2021(..) :ಹಳೇ ಮೈಸೂರಿನಲ್ಲಿ ಆದಷ್ಟು ರಸ್ತೆಗಳು ನಮ್ಮಲ್ಲಿ ಆಗಿಲ್ಲ. ಆ ಭಾಗಕ್ಕೆ ಹೋಲಿಸಿದರೆ ನಾವು ಹಿಂದೆ ಉಳಿದಿದ್ದೇವೆ. ಉತ್ತರ ಕರ್ನಾಟಕಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರ್ ನಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಸರಕಾರ ಹೆಚ್ಚಿನ ಅನುದಾನ ನೀಡಬೇಕು. ಈಗ ಮಾತ್ರ ಅಲ್ಲ ಯಾವಾಗಲೂ ಉತ್ತರ ಕರ್ನಾಟಕ ಹೀಗೆ ಅನಿಸುತ್ತದೆ. ಉತ್ತರ ಕರ್ನಾಟಕಕ್ಕೆ ಒತ್ತು ಕೊಡಬೇಕು. ಉತ್ತರ ಕರ್ನಾಟಕದ ಬಗ್ಗೆ ಈ ನಿರ್ಲಕ್ಷ್ಯ ಯಾಕೆ ಎಂದು ಹಿಂದಿನವರನ್ನೇ ಕೇಳಬೇಕು ಎಂದು ತಿಳಿಸಿದರು. : ---’ --..