“ಆಧುನಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಮಹೋನ್ನತ ಆವಿಷ್ಕಾರಗಳಾಗುತ್ತಿವೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮೈಸೂರು,ಫೆಬ್ರವರಿ,19,2021(..): ಆಧುನಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಇತ್ತೀಚಿನ ಹಲವು ಬೆಳವಣಿಗೆಗಳು ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್, ಬಯೋಕೆಮಿಸ್ಟ್ರಿ ಮತ್ತು ಆಣ್ವಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಮಹೋನ್ನತ ಆವಿಷ್ಕಾರಗಳನ್ನು ಕಾಣಬಹುದಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು. ಮೈಸೂರು ವಿವಿ ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ಅಧ್ಯಯನ ವಿಭಾಗದ ವತಿಯಿಂದ ಮಾನಸ ಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ “ಜೆನೆಟಿಕ್ಸ್ ಮತ್ತು ಜೆನೊಮಿಕ್ಸ್ನಲ್ಲಿನ ಇತ್ತೀಚಿನ ಸುಧಾರಣೆಗಳು” ವಿಷಯ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರಸಂಕಿರಣಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂದು ಆನುವಂಶಿಕತೆಯು ಆಣ್ವಿಕ ತಳಿಶಾಸ್ತ್ರ ಮತ್ತು ಜೀನೋಮಿಕ್ ವಿಶ್ಲೇಷಣೆಯ ಪ್ರಬಲ ಸಾಧನಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ ಎಂದು ವಿಶ್ವಾಸವಿದೆ ಎಂದರು. ಭಾರತ ಮತ್ತು ಇತರೆ ದೇಶಗಳ ಜನರ ವೈವಿಧ್ಯತೆಯನ್ನು ವೈದ್ಯಕೀಯ ಇತಿಹಾಸಗಳೊಂದಿಗೆ ಅನುಕ್ರಮವಾದ ವೈಯಕ್ತಿಕ ಜೀನೋಮಿಕ್ಸ್ ಅನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು. ಜೀನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಅವುಗಳನ್ನು ಹೇಗೆ ನಿಯಂತ್ರಿಸಲಾಗುತ್ತದೆ ಮತ್ತು ಜೆನೆಟಿಕ್ಸ್ ದೋಷಗಳನ್ನು ಹೇಗೆ ಕಂಡುಹಿಡಿಯಬಹುದು, ಮಾರ್ಪಡಿಸಬಹುದು ಅಥವಾ ಸರಿಪಡಿಸಬಹುದು ಇತರೆ ವಿಷಯಗಳ ಮೇಲೆ ವಿಚಾರಸಂಕಿರಣವು ಬೆಳಕು ಚೆಲ್ಲಲಿ ಎಂದರು. ಜೆನೆಟಿಕ್ಸ್ ವಿಭಾಗವು ಹಿರಿಯ ಅಧ್ಯಾಪಕರ ಮಾರ್ಗದರ್ಶನದಿಂದ ಅಭಿವೃದ್ಧಿಯಾಗಿದ್ದು, ಈ ವಿಭಾಗವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿದೆ. ಇದಕ್ಕೆ ಪೂರಕವಾಗಿ ಈ ವಿಚಾರಸಂಕಿರಣವು ಸಹಕಾರಿಯಾಗಲಿ ಎಂದು ಆಶಯವ್ಯಕ್ತಪಡಿಸಿದರು. ವಿಚಾರಸಂಕಿರಣಕ್ಕೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ.ವಿಜಯರಾಘವನ್, ಬೆಂಗಳೂರು ಸಿಎಚ್ ಜಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಚ್.ಎ.ರಂಗನಾಥ್ ಶುಭಹಾರೈಸಿದರು. ಈ ಸಂದರ್ಭ ಯುಜಿಸಿ-ಬಿಎಸ್ ಆರ್ ಪ್ರಾಧ್ಯಾಪಕ ಪ್ರೊ.ಎನ್.ಬಿ.ರಾಮಚಂದ್ರ, ಕಾರ್ಯಕ್ರಮ ಸಂಘಟನಾ ಸಮಿತಿ ಸದಸ್ಯರಾದ ಪ್ರೊ.ಎಸ್.ಎಸ್.ಮಾಲಿನಿ, ಪ್ರೊ.ಉಪೇಂದ್ರ ನಾಂಗ್ಥೊಂಬಾ, ಡಾ.ತೇಜಸ್ ಕಳಸ್ತವಾಡಿ ಇತರರು ಉಪಸ್ಥಿತರಿದ್ದರು. …. : , . 19, 2021 (..): “ , ,” . . , -, . - , “ ,” , , . , . “ ,” .“ , , , ,” .. . , , , . .. , , .. .. , , -, . .. , , . , . , .: / / / : ------. .