ಸಮಾವೇಶದ ಯಶಸ್ಸು ನೋಡಿ ಸಿದ್ಧರಾಮಯ್ಯಗೆ ಕಿರಿಕಿರಿ- ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್.. ಶಿವಮೊಗ್ಗ,ಫೆಬ್ರವರಿ,11,2021(..): ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲು ಹೋರಾಟ ಸಮಾವೇಶದ ಯಶಸ್ಸು ನೋಡಿ ಸಿದ್ಧರಾಮಯ್ಯಗೆ ಕಿರಿಕಿರಿಯಾಗಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಮಾವೇಶಕ್ಕೆ ಕುರುಬರು ಸೇರಿದ್ಧಕ್ಕೆ ಸಿದ್ದರಾಮಯ್ಯಗೆ ಸಹಿಸಲು ಆಗುತ್ತಿಲ್ಲ. ಲಕ್ಷಾಂತರ ಜನ ಸೇರುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಸಮಾವೇಶದ ಯಶಸ್ಸು ನೋಡಿ ಸಿದ್ಧರಾಮಯ್ಯಗೆ ಕಿರಿಕಿರಿಯಾಗಿದೆ. ಹಾಗೆಯೇ ಶ್ರೀಗಳು ಕರೆದರೂ ಸಮಾವೇಶಕ್ಕೆ ಸಿದ್ಧರಾಮಯ್ಯ ಬರಲಿಲ್ಲ ಎಂದು ಕಿಡಿಕಾರಿದರು. : - – – - -